ಸಾಹಿತಿಗಳಾದ ಡಾ. ಅರವಿಂದ ಮಾಲಗತ್ತಿ (ಕಾವ್ಯ), ಡಾ. ಬಸವರಾಜ ಕಲ್ಗುಡಿ (ವಿಮರ್ಶೆ, ಸಂಶೋಧನೆ), ಮಂಗಳೂರಿನ ಡಾ. ಗಾಯತ್ರಿ ನಾವಡ (ಜಾನಪದ) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ₹ 51 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಡಿ.17ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪಿ. ಸುನಿಲ್ಕುಮಾರ್, ಸದಸ್ಯ ಕಾರ್ಯದರ್ಶಿ ಈರಪ್ಪ ಆಶಾಪುರ, ಸಂಚಾಲಕ ಪ್ರೊ. ದೊಡ್ಡಣ ಬಜಂತ್ರಿ ತಿಳಿಸಿದ್ದಾರೆ.