<p><strong>ಕಾಸರಗೋಡು</strong>: ಜಿಲ್ಲೆಯ ವಿವಿಧೆಡೆ ಗುರುವಾರ ಬಿರುಸಿನ ಮಳೆಯಾಗಿದ್ದು, ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಜಲಾವೃತವಾಗಿದೆ.</p>.<p>ಇಡೀ ದಿನ ಮೋಡಕವಿದ ವಾತಾವರಣವಿದ್ದು, ಆಗಾಗ ಬಿಡುಸಿನ ಮಳೆ ಆಗಿದೆ. ಮಧೂರಿನ ಮಧುವಾಹಿನ ನದಿ ಉಕ್ಕಿ ಹರಿದು ದೇವಾಲಯ ಜಲಾವೃತವಾಗಿದ್ದು, ಗುರುವಾರ ನಸುಕಿನಿಂದಲೇ ದೈನಂದಿನ ಚಟುವಟಿಕೆಗಳಿಗೆ ತೊಡಕಾಗಿತ್ತು. ಈ ಪ್ರದೇಶದ ತಗ್ಗು ಪ್ರದೇಶದಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಸಂಕಷ್ಟದಲ್ಲಿ ಇರುವವರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಸಿರಿಬಾಗಿಲು, ಪಟ್ಲ, ಮೊಗರು, ಪೊಯ್ಯವಳಪ್, ಬೀಯಾರಂ ಪ್ರದೇಶವೂ ಜಲಾವೃತಗೊಂಡಿದೆ.</p>.<p>ಕುಂಬಳೆ ರೈಲುನಿಲ್ದಾಣದ ಅಂಡರ್ಪಾಸ್ ಜಲಾವೃತವಾಗಿದೆ. ಬತ್ತೇರಿ, ಕೊಯಿಪ್ಪಾಡಿ ಕರಾವಳಿ ನಿವಾಸಿಗಳು ಸಂಪರ್ಕ ಕಡಿದುಕೊಂಡಿದ್ದಾರೆ. ಮೊಗ್ರಾಲ್ ನಾಂಗಿ ಕರಾವಳಿ ರಸ್ತೆಯಲ್ಲೂ ನೆರೆ ಬಂದಿದ್ದು, ವಿವಿಧೆಡೆ ಕಡಲ್ಕೊರೆತ ತೀವ್ರವಾಗಿದೆ.</p>.<p>ಜಿಲ್ಲೆಯ ಮಲೆನಾಡು ಪ್ರದೇಶವಾದ ಕೊಟ್ಟೋಡಿ ಪೇಟೆ ಜಲಾವೃತವಾಗಿದೆ. ಕೊಟ್ಟೋಡಿ ನದಿ ಸಹಿತ ಜಲಾಶಯಗಳು ಉಕ್ಕಿ ಹರಿದಿವೆ. ಮನೆ, ದೇವಾಲಯ ಮತ್ತು ಮಳಿಗೆಗಳಿಗೆ ನೀರು ನುಗ್ಗಿದೆ. ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯುತ್ ವ್ಯತ್ಯಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು</strong>: ಜಿಲ್ಲೆಯ ವಿವಿಧೆಡೆ ಗುರುವಾರ ಬಿರುಸಿನ ಮಳೆಯಾಗಿದ್ದು, ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಜಲಾವೃತವಾಗಿದೆ.</p>.<p>ಇಡೀ ದಿನ ಮೋಡಕವಿದ ವಾತಾವರಣವಿದ್ದು, ಆಗಾಗ ಬಿಡುಸಿನ ಮಳೆ ಆಗಿದೆ. ಮಧೂರಿನ ಮಧುವಾಹಿನ ನದಿ ಉಕ್ಕಿ ಹರಿದು ದೇವಾಲಯ ಜಲಾವೃತವಾಗಿದ್ದು, ಗುರುವಾರ ನಸುಕಿನಿಂದಲೇ ದೈನಂದಿನ ಚಟುವಟಿಕೆಗಳಿಗೆ ತೊಡಕಾಗಿತ್ತು. ಈ ಪ್ರದೇಶದ ತಗ್ಗು ಪ್ರದೇಶದಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಸಂಕಷ್ಟದಲ್ಲಿ ಇರುವವರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಸಿರಿಬಾಗಿಲು, ಪಟ್ಲ, ಮೊಗರು, ಪೊಯ್ಯವಳಪ್, ಬೀಯಾರಂ ಪ್ರದೇಶವೂ ಜಲಾವೃತಗೊಂಡಿದೆ.</p>.<p>ಕುಂಬಳೆ ರೈಲುನಿಲ್ದಾಣದ ಅಂಡರ್ಪಾಸ್ ಜಲಾವೃತವಾಗಿದೆ. ಬತ್ತೇರಿ, ಕೊಯಿಪ್ಪಾಡಿ ಕರಾವಳಿ ನಿವಾಸಿಗಳು ಸಂಪರ್ಕ ಕಡಿದುಕೊಂಡಿದ್ದಾರೆ. ಮೊಗ್ರಾಲ್ ನಾಂಗಿ ಕರಾವಳಿ ರಸ್ತೆಯಲ್ಲೂ ನೆರೆ ಬಂದಿದ್ದು, ವಿವಿಧೆಡೆ ಕಡಲ್ಕೊರೆತ ತೀವ್ರವಾಗಿದೆ.</p>.<p>ಜಿಲ್ಲೆಯ ಮಲೆನಾಡು ಪ್ರದೇಶವಾದ ಕೊಟ್ಟೋಡಿ ಪೇಟೆ ಜಲಾವೃತವಾಗಿದೆ. ಕೊಟ್ಟೋಡಿ ನದಿ ಸಹಿತ ಜಲಾಶಯಗಳು ಉಕ್ಕಿ ಹರಿದಿವೆ. ಮನೆ, ದೇವಾಲಯ ಮತ್ತು ಮಳಿಗೆಗಳಿಗೆ ನೀರು ನುಗ್ಗಿದೆ. ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯುತ್ ವ್ಯತ್ಯಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>