ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪ್ರತಾಪಸಿಂಹ ನಾಯಕ್ ಪ್ರಶಸ್ತಿ ಪ್ರದಾನ ಮಾಡಿದರು. ನೃತ್ಯ ಕಲಾವಿದೆ ವಿದುಷಿ ಮಾನಸಿ ಸುಧೀರ್ ಭಾಗವಹಿಸಿದ್ದರು. ಮಾಧವ ಹೇರಳ, ಡಾ. ರೋಹಿಣಿ ಅಯ್ಯರ್, ಗಿರಿಜಾ ಚಂದ್ರನ್, ರಾಜೇಂದ್ರ ಕಲ್ಲೂರಾಯ, ಗಣೇಶ್ ಕುಂಬಳೆ, ಡಾ. ರಮಾ ಅಯ್ಯರ್, ವಿದ್ವಾನ್ ಸುಧೀರ್ ರಾವ್ ಇದ್ದರು. ಡಾ. ನಾ.ದಾ. ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಪೂಕಳ ಲಕ್ಷ್ಮೀನಾರಾಯಣ ಭಟ್, ಜಯಲಕ್ಷ್ಮಿ ಕಾರಂತ, ಸುಜಿತ್ ಕುಮಾರ್ ಹಾಗೂ ಬಿ ಮೇಧಾ ನಾಯಕ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಡುಪಿ ಕೊಡವೂರಿನ ನೃತ್ಯ ಸಿಂಚನ ಹಾಗೂ ಖ್ಯಾತ ಗಾಯಕ ಕಿಶೋರ್ ಪೆರ್ಲ ಅವರಿಂದ ಭಾವಗಂಧ ಕಾರ್ಯಕ್ರಮ ನಡೆಯಿತು. ಚಿನ್ನಾ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು.