‘ಬಸದಿಗೆ ಹೋದಾಗ ಎಲ್ಲರೂ ದರ್ಶನ ಸ್ತುತಿಯನ್ನು ಹಾಡಬೇಕು. ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ, ಶ್ಲೋಕಗಳನ್ನು, ಅಷ್ಟಕಗಳನ್ನು ಹೇಳಬೇಕು. ಜಾತಿ ಜೈನರು ನೀತಿ ಜೈನರೂ ಆಗಬೇಕು’ ಎಂದು ಅವರು ಸಲಹೆ ನೀಡಿದರು. ಜೈನರು ಕಡ್ಡಾಯವಾಗಿ ಮದ್ಯ ಮತ್ತು ಮಾಂಸ ತ್ಯಜಿಸಬೇಕು. ಲೌಕಿಕದ ಜೊತೆಗೆ ನಾವುಆಧ್ಯಾತ್ಮಿಕ ಜಾಗೃತಿ ಮೂಡಿಸಿಕೊಳ್ಳಬೇಕು. ದಿನನಿತ್ಯವೂ ದೇವರ ದರ್ಶನ, ಅಷ್ಟವಿಧಾರ್ಚನೆ ಪೂಜೆ, ಜಪ,ತಪ, ಧ್ಯಾನದೊಂದಿಗೆ ಕರ್ಮಗಳ ಕ್ಷಯ ಮಾಡಿ ಪುಣ್ಯ ಸಂಚಯಮಾಡಿಕೊಳ್ಳಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪ್ರತೀ ದಿನ ಅಷ್ಟವಿಧಾರ್ಚನೆ ಪೂಜೆ ಮಾಡಿ ಮೂರೂ ಹೊತ್ತು ಸ್ನಾನ ಮಡಿಯಲ್ಲಿ ದೇವಸ್ಥಾನಕ್ಕೆ ಹೋಗುತ್ತಾರೆ’ ಎಂದು ಹೇಳಿದರು.