ಕೃತಿ ಪರಿಚಯ ಮಾಡಿದ ಇತಿಹಾಸ ತಜ್ಞ ಪುಂಡಿಕಾಯಿತಿ ಗಣಪಯ್ಯ ಭಟ್, ‘ದಕ್ಷಿಣ ಭಾರತದ ಗಾಂಧಿ ಎಂದೇ ಜನಪ್ರಿಯರಾಗಿದ್ದ ಕಾರ್ನಾಡ್ ಸದಾಶಿವ ರಾವ್ ಬದುಕಿದ್ದು ಕೇವಲ 56 ವರ್ಷವಾದರೂ ಅವರ ಬದುಕಿನ ದಾರಿಗಳನ್ನು ಕೇಳುವಾಗ ಆಶ್ಚರ್ಯ ಉಂಟುಮಾಡುತ್ತದೆ. ರಾಜಕಾರಣಿಯಾಗಿ, ಸಮಾಜ ಸುಧಾರಕರಾಗಿ ಕೆಲಸ ಮಾಡಿದ ಕಾರ್ನಾಡ್ ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ಕೊಟ್ಟ ದೇಶಪ್ರೇಮಿ. ದೇಶದ ಹಿತಕ್ಕೋಸ್ಕರ ಅತೀ ಔದಾರ್ಯವಂತರಾದರು. ಅಗರ್ಭ ಶ್ರೀಮಂತರಾಗಿದ್ದರೂ ಜೀವಿತದ ಕೊನೆಯ ಅವಧಿಯಲ್ಲಿ ಮನೆ ಮಠಗಳನ್ನು ಕಳೆದುಕೊಳ್ಳಬೇಕಾಯಿತು. ಇದನ್ನು ಅರವಿಂದ ಚೊಕ್ಕಾಡಿಯವರು ‘ಕಬೀರನಾದ ಕುಬೇರ’ ಎಂಬ ಕೃತಿಯಲ್ಲಿ ಸಮಗ್ರವಾಗಿ ತೆರೆದಿಟ್ಟಿದ್ದಾರೆ’ ಎಂದರು.