ವಿದ್ವಾಂಸರಾದ ಅಮೃತ ಸೋಮೇಶ್ವರ ಮತ್ತು ದಿ.ರಾಮಚಂದ್ರ ಉಚ್ಚಿಲರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಕಲಾಗಂಗೋತ್ರಿ ಸಂಸ್ಥೆಯು ಯಕ್ಷಗಾನ ಕಲೆಗೆ ಸಂಬಂಧಿಸಿದ ಅನೇಕ ಕಮ್ಮಟ, ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ ಮತ್ತು ದಾಖಲಾತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಕಲೆಗೆ ಸಂಬಂಧಿಸಿದ ಹಲವು ಗ್ರಂಥಗಳನ್ನು ಪ್ರಕಟಿಸಿದೆ ಎಂದರು. ಟ್ರಸ್ಟ್ ಪ್ರಮುಖರಾದ ಸತೀಶ ಕಾರಂತ, ದಯಾನಂದ ಪಿಲಿಕೂರು, ಕೆ.ಎ.ಶೆಟ್ಟಿ, ಕೃಷ್ಣಪ್ಪ ಕೋಟೆಕಾರ್ ಇದ್ದರು.