ಈ ಕುರಿತು ಟ್ವೀಟ್ ಮಾಡಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಟ್ಯಾಗ್ ಮಾಡಿರುವ ಅವರು, ‘ರಾಜ್ಯದ ಬಸ್ ಮಾರ್ಗಗಳನ್ನು ಸರ್ಕಾರದ ನಿಗಮಕ್ಕೆ ಸೀಮಿತಗೊಳಿಸಿ, ಖಾಸಗಿ ಬಸ್ಗಳಿಗೆ ಪರವಾನಗಿ ನಿರ್ಬಂಧಿಸುವ ಈ ಕಾಯ್ದೆಯಿಂದ ರಾಜ್ಯದಲ್ಲಿ ಸಾರಿಗೆ ಸುಧಾರಣೆಗೆ ಹಿನ್ನಡೆಯಾಗಿದೆ. ಇದು ಜನ ಸಾಮಾನ್ಯರೂ ಉತ್ತಮ ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡಿದೆ. ಇದರ ಪರಿಣಾಮವೇ ಮುಷ್ಕರಕ್ಕೂ ಅವಕಾಶವಾಗಿದೆ. ಕೂಡಲೇ ಕೆ–ಸಿಎಎಸ್ ಹಿಂಪಡೆಯಿರಿ. ತೆರಿಗೆಯಲ್ಲೂ ಏಕ ವ್ಯವಸ್ಥೆಯನ್ನು ಜಾರಿಗೊಳಿಸಿ’ ಎಂದು ಅವರು ಆಗ್ರಹಿಸಿದ್ದಾರೆ.