ಈ ಕುರಿತಂತೆ ರಾಜ್ಯ ಮುಜರಾಯಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಕಳೆದ ತಿಂಗಳ 30ರಂದು ಆದೇಶ ಹೊರಡಿಸಿದ್ದು, ‘ಯಕ್ಷಗಾನ ಆಯೋಜನೆ ಮತ್ತು ಅದಕ್ಕಾಗಿ ಶುಲ್ಕ ಸಂಗ್ರಹವು ಯಕ್ಷಗಾನ ಆಯೋಜನೆ ಮತ್ತು ನಿಯಂತ್ರಣ ಹಕ್ಕುಗಳ ನಿಯಮ 40–ಡಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಸರ್ಕಾರದ ಪೂರ್ವಾನುಮತಿ ಇಲ್ಲದೇ ಯಾವುದೇ ಸ್ವಯಂ ಸೇವಾ ಸಂಘಟನೆ, ಸೇವಾಸಮಿತಿ ಅಥವಾ ಅಭಿವೃದ್ಧಿ ಸಮಿತಿಗಳು ದೇಣಿಗೆ ಪಡೆಯುವುದು ಕಾನೂನು ಬಾಹಿರ’ ಎಂದು ತಿಳಿಸಿದ್ದಾರೆ.