ಪುತ್ತೂರು: ‘ಕೆಎಸ್ಆರ್ಟಿಸಿಯ ನಗದು ವ್ಯವಹಾರ ವಿಭಾಗದ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ‘ನಗದು ಪಾವತಿ ಕಡಿತ ಚಳವಳಿ’ಯನ್ನು ಸಂಸ್ಥೆಯು ಪೂರ್ಣವೇತನ ಪಾವತಿಸಿರುವ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ’ ಎಂದು ಪುತ್ತೂರು ವಿಭಾಗ ಕೆಎಸ್ಆರ್ಟಿಸಿ ಮಜ್ದೂರ್ ಸಂಘದ ಗೌರವ ಅಧ್ಯಕ್ಷ ಗಿರೀಶ ಮಳಿ ತಿಳಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಜ್ದೂರ್ ಸಂಘ ನೀಡಿದ ಚಳವಳಿ ಕರೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ವೇತನ ಪಾವತಿ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಶಾಂತಾರಾಮ ವಿಟ್ಲ, ಬಿ. ರಾಮಕೃಷ್ಣ, ವೆಂಕಟರಮಣ ಭಟ್, ಸಂಜೀವ ಗೌಡ, ಸತ್ಯಶಂಕರ ಭಟ್, ಮಹಾಬಲ ಜಿ., ಕಾರ್ಯಕಾರಿ ಸಮಿತಿ ಸದಸ್ಯ ರಾಮಚಂದ್ರ ಅಡಪ ಇದ್ದರು.