ಅರ್ಚಕರು ದೇಗುಲದ ಆನೆ ‘ಯಶಸ್ವಿ’ಗೆ ಆರತಿ ಬೆಳಗಿ, ಪ್ರಸಾದ ನೀಡಿದರು. ದೇಗುಲದಲ್ಲಿ ವಿಶೇಷ ಪ್ರಾರ್ಥನೆ, ಧನಲಕ್ಷ್ಮಿ, ಗೋಪೂಜೆಗಳು ನಡೆದವು.ದೀಪಾವಳಿ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.ದೇಗುಲದ ಕಾರ್ಯನಿರ್ವಹಣಾಧಿಕಾರಿಯಾದ ಪುತ್ತೂರು ತಹಶೀಲ್ದಾರ್ ಅನಂತಕೃಷ್ಣ, ಸಹಾಯಕ ಕಾರ್ಯನಿವರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್, ದೇಗುಲದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶಿಷ್ಟಚಾರ ಅಧಿಕಾರಿ ಗೋಪಿನಾಥ ನಂಭೀಶ, ದೇಗುಲದ ಸಿಬ್ಬಂದಿಗಳು, ಮಾವುತರು, ಭಕ್ತರು ಉಪಸ್ಥಿತರಿದ್ದರು.