ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಇದೇ 18, 19 ಹಾಗೂ 20ರಂದು ನಿತ್ಯವೂ ಬೆಳಿಗ್ಗೆ 10ರಿಂದ ಮಕ್ಕಳಿಗಾಗಿ ಕೃಷ್ಣ ವೇಷ ಮತ್ತು ಚಿತ್ರಕಲೆ, ಶ್ಲೋಕ ಪಠಣೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 18ರಂದು ಸಂಜೆ 6ರಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಸಂಜೆ ವಿಶೇಷ ಆರತಿ, ಕೀರ್ತನೆ, ಅಭಿಷೇಕ, ಭಾಗವತ ಪ್ರವಚನ, ಮಹಾ ಮಂಗಳಾರತಿಗಳು ನಡೆಯಲಿವೆ. ಇದೇ 19ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಕೀರ್ತನೆ, ಮಹಾ ಅಭಿಷೇಕ, ಭಾಗವತ ಪ್ರವಚನ, ಮಹಾ ಮಂಗಳಾರತಿಗಳು ನಡೆಯಲಿವೆ. 20ರಂದು ಶ್ರೀಲ ಪ್ರಭುಪಾದ ವ್ಯಾಸಪೂಜೆ ನಡೆಯಲಿದೆ’ ಎಂದರು.