ಗಣೇಶ್ ಅವರು ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬಂದಿದ್ದರು. ಊಟ ಮುಗಿಸಿ ನಾಯಿಮರಿಗೆ ತಿಂಡಿ ಹಾಕುವ ತಯಾರಿಯಲ್ಲಿದ್ದಾಗ ಹೊರಗೆ ಶಬ್ದ ಕೇಳಿ ಓಡಿಬಂದು ನೋಡಿದರೆ ಚಿರತೆಯು ನಾಯಿಮರಿಯನ್ನು ಕಚ್ಚಿಕೊಂಡು ನಿಂತಿತ್ತು. ಬಾಗಿಲು ಮುಚ್ಚಿ ಕಿಟಕಿ ಬಾಗಿಲಿನ ಮೂಲಕ ನೋಡಿದಾಗ ಚಿರತೆ ನಾಯಿಮರಿಯನ್ನು ಎತ್ತಿಕೊಂಡು ತೋಟದ ಕಡೆಗೆ ಹೋಯಿತು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.