ಈ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿವೇಕ್ ರಾಜ್ ಪೂಜಾರಿ, ‘ಈ ಬಾರಿ 16,000 ಮಂದಿಗೆ ಊಟ, 4,350 ಕುಟುಂಬ ಸದಸ್ಯರಿಗೆ , ದಿನಗೂಲಿ ನೌಕರರಿಗೆ ಕಿಟ್ ನೀಡಿದ್ದು , ಜೊತೆಗೆ ಹಲವು ಬಡ ಕುಟುಂಬ ಗಳ ಆಸ್ಪತ್ರೆ ಚಿಕಿತ್ಸೆಯ ವೆಚ್ಚವನ್ನು ಸಹ ಪನಾಮ ಕಂಪನಿ ವತಿಯಿಂದ ಬರಿಸಿದ್ದೇನೆ. ನಾವು ದಿನಸಿ ನೀಡುವ ಕಿಟ್ ಒಂದು ಕುಟುಂಬಕ್ಕೆ 15 ದಿನ ಉಪಯೋಗಕ್ಕೆ ಬರಲಿದೆ. ಕಳೆದ ವರ್ಷದ ಕೋವಿಡ್ ಲಾಕ್ಡೌನ್ ಸಂಧರ್ಭ ಸುಮಾರು 14,000 ಮಂದಿಗೆ ಬೀದಿ ಬದಿ ಊಟ, 2000 ಮಂದಿಗೆ ಕಿಟ್ , 12 ಮಂದಿಗೆ ಮಾರಾಟಕ್ಕಾಗಿ ತಳ್ಳುಗಾಡಿ ತುಂಬಾ ತರಕಾರಿ , ಮತ್ತು 50 ಬಿಸಿಲು ದೊಡ್ಡ ಕೊಡೆಗಳನ್ನು ಉಚಿತವಾಗಿ ನೀಡಲಾಗಿದೆ. ಸಂಕಷ್ಟ ದಲ್ಲಿದ್ದವರಿಗೆ ತಮ್ಮ ಊರಿಗೆ ಹೋಗಲು ಆರ್ಥಿಕ ಸಹಾಯ ಮಾಡಲಾಗಿದೆ’ ಎಂದರು.