ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಂಕಷ್ಟದಲ್ಲಿ ಯುವ ಉದ್ಯಮಿ ನೆರವು

ಪನಾಮ ನೇಚರ್ ಫ್ರೆಶ್ ಸಂಸ್ಥೆಯ ಸಿಇಒ ಮಂಗಳೂರಿನ ವಿವೇಕ್‌ ರಾಜ್‌
Last Updated 5 ಜೂನ್ 2021, 12:00 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಮಂಗಳೂರಿನ ಯುವ ಉದ್ಯಮಿ ಪನಾಮ ನೇಚರ್ ಫ್ರೆಶ್ ಸಂಸ್ಥೆಯ ಅಧ್ಯಕ್ಷ ವಿವೇಕ್ ರಾಜ್ ಪೂಜಾರಿ ಸಂಕಷ್ಟದಲ್ಲಿರುವ ಸಹಸ್ರಾರು ಮಂದಿಗೆ ಬಡವರ ಪಾಲಿಗೆ ಕಣ್ಮಣಿ ಯಾಗಿದ್ದಾರೆ.

ಈ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿವೇಕ್ ರಾಜ್ ಪೂಜಾರಿ, ‘ಈ ಬಾರಿ 16,000 ಮಂದಿಗೆ ಊಟ, 4,350 ಕುಟುಂಬ ಸದಸ್ಯರಿಗೆ , ದಿನಗೂಲಿ ನೌಕರರಿಗೆ ಕಿಟ್ ನೀಡಿದ್ದು , ಜೊತೆಗೆ ಹಲವು ಬಡ ಕುಟುಂಬ ಗಳ ಆಸ್ಪತ್ರೆ ಚಿಕಿತ್ಸೆಯ ವೆಚ್ಚವನ್ನು ಸಹ ಪನಾಮ ಕಂಪನಿ ವತಿಯಿಂದ ಬರಿಸಿದ್ದೇನೆ. ನಾವು ದಿನಸಿ ನೀಡುವ ಕಿಟ್ ಒಂದು ಕುಟುಂಬಕ್ಕೆ 15 ದಿನ ಉಪಯೋಗಕ್ಕೆ ಬರಲಿದೆ. ಕಳೆದ ವರ್ಷದ ಕೋವಿಡ್‌ ಲಾಕ್‌ಡೌನ್‌ ಸಂಧರ್ಭ ಸುಮಾರು 14,000 ಮಂದಿಗೆ ಬೀದಿ ಬದಿ ಊಟ, 2000 ಮಂದಿಗೆ ಕಿಟ್ , 12 ಮಂದಿಗೆ ಮಾರಾಟಕ್ಕಾಗಿ ತಳ್ಳುಗಾಡಿ ತುಂಬಾ ತರಕಾರಿ , ಮತ್ತು 50 ಬಿಸಿಲು ದೊಡ್ಡ ಕೊಡೆಗಳನ್ನು ಉಚಿತವಾಗಿ ನೀಡಲಾಗಿದೆ. ಸಂಕಷ್ಟ ದಲ್ಲಿದ್ದವರಿಗೆ ತಮ್ಮ ಊರಿಗೆ ಹೋಗಲು ಆರ್ಥಿಕ ಸಹಾಯ ಮಾಡಲಾಗಿದೆ’ ಎಂದರು.

‘ಈ ಬಾರಿಯ ಲಾಕ್‌ಡೌನ್‌ ಸಂದರ್ಭ ಸರ್ಕಾರದಿಂದ ವ್ಯವಸ್ಥೆ ವಿಫಲ ವಾಗಿದೆ. ಕೆಲಸಗಾರರಿಗೆ ಸಂಚಾರಕ್ಕೆ ಬೇರೆ ವ್ಯವಸ್ಥೆ ಇಲ್ಲ. ಜೊತೆಗೆ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಜನರ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಿವೆ. ಸಾರ್ವಜನಿಕರ ಸಂಕಷ್ಟವನ್ನು ನಿರ್ಲಕ್ಷಿಸಿದೆ. ಸರ್ಕಾರಕ್ಕೆ ತೆರಿಗೆ ತುಂಬುವ ಉದ್ದಿಮೆದಾರರಿಗೂ ಉಪಯೋಗ ಆಗಿಲ್ಲ ಎಂದು ಖೇದ ವ್ಯಕ್ತ ಪಡಿಸಿದರು. ರಜಾಕ್ ಉಪಸ್ಥಿತರಿದ್ದರು.

‘ಹಣ್ಣು ತರಕಾರಿ ನೇರ ಖರೀದಿಗೆ ₹75 ಕೋಟಿ’

‘ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿ ಇಲ್ಲದ್ದರಿಂದ, ಬೆಲೆ ಕುಸಿತ ಇತ್ಯಾದಿಗಳಿಂದ ಕೃಷಿಕರು ಹಣ್ಣೂ, ಕರಕಾರಿ ಕೃಷಿ ಉತ್ಪನ್ನಗಳನ್ನು ಬೀದಿಗೆ ಸುರಿಯುವುದನ್ನು ನೋಡಿದ್ದೇನೆ. ರೈತರು ತಾವು ಬೆಳೆದ ಬೆಳೆದ ತರಕಾರಿ, ಹಣ್ಣುಗಳನ್ನು ಪನಾಮ ಕಂಪನಿ ಹೊಲದಿಂದಲೇ ಖರೀದಿ ಮಾಡಲಿದೆ . ₹75 ಕೋಟಿ ವೆಚ್ಚದಲ್ಲಿ ಕೃಷಿಕರು ಬೆಳೆದ ಉತ್ಪನ ಗಳನ್ನು ಖರೀದಿಸುವ ಯೋಜನೆಯನ್ನು ಕೈಗೊಂಡಿದ್ದೀನೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು ₹50 ಲಕ್ಷ ಮೊತ್ತವನ್ನು ಮೀಸಲಿಟ್ಟಿದ್ದೇನೆ ಎಂದು ವಿವೇಕ್ ರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT