<p><strong>ಬದಿಯಡ್ಕ (ಕಾಸರಗೋಡು):</strong> ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡೂರು ಗ್ರಾಮದ ಗೋರಿಗದ್ದೆ ಅಂಗನವಾಡಿಗೆ ಕನ್ನಡ ಮಾತೃಭಾಷೆಯ ಮಕ್ಕಳಿಗೆ ಶಿಕ್ಷಣ ನೀಡಲು ಮಲಯಾಳಿ ಶಿಕ್ಷಕಿಯನ್ನು ನೇಮಿಸಿದ್ದು, ಆಕ್ಷೇಪ ವ್ಯಕ್ತವಾಗಿದೆ.</p>.<p>ಗಡಿ ಪ್ರದೇಶದ ಅಂಗನವಾಡಿಯಲ್ಲಿ ಪ್ರಾದೇಶಿಕವಾದ ಎರಡು ಭಾಷೆ ತಿಳಿದವರನ್ನೇ ಶಿಕ್ಷಕಿಯಾಗಿ ನೇಮಕ ಮಾಡಬೇಕು ಎಂಬ ನಿಯಮವಿದೆ. ಗೋರಿಗದ್ದೆ ಅಂಗನವಾಡಿಯಲ್ಲಿ 16 ಮಂದಿ ಮಕ್ಕಳಲ್ಲಿ 14 ಮಂದಿ ಕನ್ನಡಿಗರು. ಆದರೂ ಕನ್ನಡ ತಿಳಿಯದ ಶಿಕ್ಷಕಿಯನ್ನು ನೇಮಕ ಮಾಡಲಾಗಿದೆ.</p>.<p>ಈಗ ತಾತ್ಕಾಲಿಕವಾಗಿ ನೇಮಕಾತಿ ಆಗಿದ್ದರೂ, ಮುಂದೆ ಕಾಯಂ ಮಾಡುವ ಹುನ್ನಾರ ಎಂದು ಪೋಷಕರು ದೂರಿದ್ದಾರೆ.</p>.<p>ಕಳೆದ ವರ್ಷ ಇದೇ ಪಂಚಾಯಿತಿಯ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ಕನ್ನಡ ಮಕ್ಕಳಿಗೆ ಸಮಾಜ ವಿಜ್ಞಾನ ಬೋಧಿಸಲು ಕನ್ನಡ ಸರಿಯಾಗಿ ತಿಳಿಯದ ಮಲಯಾಳಿ ಶಿಕ್ಷಕಿಯನ್ನು ನೇಮಿಸಲಾಗಿತ್ತು. ನಂತರ ಹೈಕೋರ್ಟ್ ತೀರ್ಪು ಕನ್ನಡ ವಿದ್ಯಾರ್ಥಿಗಳ ಪರವಾಗಿ ಬಂದಿತ್ತು.</p>.<p>ಇದೀಗ ಅಂಗನವಾಡಿಯ ಹಂತದಿಂದಲೇ ಈ ಪ್ರದೇಶದಲ್ಲಿ ಕನ್ನಡ ಭಾಷೆಯನ್ನು ನಾಶ ಮಾಡುವ ಹುನ್ನಾರ ನಡೆದಿದೆ ಎಂದು ‘ಕನ್ನಡ ಪೋಷಕಿ’ ನಯನಾ ಗಿರೀಶ್ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬದಿಯಡ್ಕ (ಕಾಸರಗೋಡು):</strong> ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡೂರು ಗ್ರಾಮದ ಗೋರಿಗದ್ದೆ ಅಂಗನವಾಡಿಗೆ ಕನ್ನಡ ಮಾತೃಭಾಷೆಯ ಮಕ್ಕಳಿಗೆ ಶಿಕ್ಷಣ ನೀಡಲು ಮಲಯಾಳಿ ಶಿಕ್ಷಕಿಯನ್ನು ನೇಮಿಸಿದ್ದು, ಆಕ್ಷೇಪ ವ್ಯಕ್ತವಾಗಿದೆ.</p>.<p>ಗಡಿ ಪ್ರದೇಶದ ಅಂಗನವಾಡಿಯಲ್ಲಿ ಪ್ರಾದೇಶಿಕವಾದ ಎರಡು ಭಾಷೆ ತಿಳಿದವರನ್ನೇ ಶಿಕ್ಷಕಿಯಾಗಿ ನೇಮಕ ಮಾಡಬೇಕು ಎಂಬ ನಿಯಮವಿದೆ. ಗೋರಿಗದ್ದೆ ಅಂಗನವಾಡಿಯಲ್ಲಿ 16 ಮಂದಿ ಮಕ್ಕಳಲ್ಲಿ 14 ಮಂದಿ ಕನ್ನಡಿಗರು. ಆದರೂ ಕನ್ನಡ ತಿಳಿಯದ ಶಿಕ್ಷಕಿಯನ್ನು ನೇಮಕ ಮಾಡಲಾಗಿದೆ.</p>.<p>ಈಗ ತಾತ್ಕಾಲಿಕವಾಗಿ ನೇಮಕಾತಿ ಆಗಿದ್ದರೂ, ಮುಂದೆ ಕಾಯಂ ಮಾಡುವ ಹುನ್ನಾರ ಎಂದು ಪೋಷಕರು ದೂರಿದ್ದಾರೆ.</p>.<p>ಕಳೆದ ವರ್ಷ ಇದೇ ಪಂಚಾಯಿತಿಯ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ಕನ್ನಡ ಮಕ್ಕಳಿಗೆ ಸಮಾಜ ವಿಜ್ಞಾನ ಬೋಧಿಸಲು ಕನ್ನಡ ಸರಿಯಾಗಿ ತಿಳಿಯದ ಮಲಯಾಳಿ ಶಿಕ್ಷಕಿಯನ್ನು ನೇಮಿಸಲಾಗಿತ್ತು. ನಂತರ ಹೈಕೋರ್ಟ್ ತೀರ್ಪು ಕನ್ನಡ ವಿದ್ಯಾರ್ಥಿಗಳ ಪರವಾಗಿ ಬಂದಿತ್ತು.</p>.<p>ಇದೀಗ ಅಂಗನವಾಡಿಯ ಹಂತದಿಂದಲೇ ಈ ಪ್ರದೇಶದಲ್ಲಿ ಕನ್ನಡ ಭಾಷೆಯನ್ನು ನಾಶ ಮಾಡುವ ಹುನ್ನಾರ ನಡೆದಿದೆ ಎಂದು ‘ಕನ್ನಡ ಪೋಷಕಿ’ ನಯನಾ ಗಿರೀಶ್ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>