ಬೆಳಿಗ್ಗೆ ದೇಗುಲಕ್ಕೆ ಆಗಮಿಸಿದ ಅವರು ಆಶ್ಲೇಷಬಲಿ, ನಾಗಪ್ರತಿಷ್ಠೆ, ಪವಮಾನ ಅಭಿಷೇಕ, ಶೇಷ ಸೇವೆ ನೆರವೇರಿಸಿದರು. ಹೊಸೊಳಿಗಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಬಳಿಕ ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠಕ್ಕೆ ತೆರಳಿ ಅಲ್ಲಿ ಆಶ್ಲೇಷ ಸೇವೆ ನೆರವೇರಿಸಿಕೊಂಡರು. ಅವರ ಭೇಟಿ ಖಾಸಗಿ ಹಿನ್ನಲೆಯಲ್ಲಿ ಭೇಟಿ ವೇಳೆ ಅವರು ಪೊಟೊ ತೆಗೆಸಿಕೊಳ್ಳಲು ನಿರಾಕರಿಸಿದರು. ಭೇಟಿ ವೇಳೆ ದೇಗುಲದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶ ಉಪಸ್ಥಿತರಿದ್ದರು.