<p><strong>ಮಂಗಳೂರು</strong>: ನಗರದ ಲೋಯರ್ ಬೆಂದೂರು 3ನೇ ಅಡ್ಡರಸ್ತೆಯ ಡಾಮಿನೋಜ್ ಪಿಡ್ಜಾ ಕಾರ್ನರ್ ಸಮೀಪ ತೆಂಗಿನ ಮರದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿದ್ದ ಬೃಹತ್ ಕಣಜದ ಹುಳಗಳ (ಪಿಲಿಕುಂಡೆಲು) ಗೂಡನ್ನು ಮಂಗಳೂರು ಮಹಾನಗರ ಪಾಲಿಕೆ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ, ನಾಶಪಡಿಸಿದೆ.</p>.<p>ಗುರುಪುರ ಅಣ್ಣಪ್ಪ ಪ್ರಭು ಎಂಬುವವರ ಮನೆಯ ಆವರಣದಲ್ಲಿನ ತೆಂಗಿನ ಮರದಲ್ಲಿ ದೊಡ್ಡ ಗಾತ್ರದ ಕಣಜದ ಹುಳುಗಳು ಗೂಡು ಕಟ್ಟಿದ್ದವು. ಈ ಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದರೆ ಸಾವು ಕೂಡ ಸಂಭವಿಸುವ ಅಪಾಯವಿದೆ. ಈ ಕಾರಣದಿಂದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದರು. ಸೆಪ್ಟೆಂಬರ್ 18ರ ಸಂಚಿಕೆಯಲ್ಲಿ ‘ಪ್ರಜಾವಾಣಿ’ ಈ ಬಗ್ಗೆ ಚಿತ್ರಸಹಿತ ವರದಿ ಪ್ರಕಟಿಸಿತ್ತು.</p>.<p>ಪತ್ರಿಕೆಯ ವರದಿ ಬಳಿಕ ಕಣಜದ ಗೂಡುಗಳ ತೆರವು ಕಾರ್ಯಾಚರಣೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಮರ ಹತ್ತುವುದರಲ್ಲಿ ಅನುಭವಿಗಳಾಗಿರುವ ಕೆಲವರನ್ನು ಶುಕ್ರವಾರ ಕರೆತರಲಾಗಿತ್ತು. ಆದರೆ, ಅವರಿಗೂ ಕಣಜದ ಗೂಡು ತೆರವು ಮಾಡಲು ಸಾಧ್ಯವಾಗಿರಲಿಲ್ಲ. ಅರ್ಧದಲ್ಲೇ ಕಾರ್ಯಾಚರಣೆ ಕೈಬಿಡಲಾಗಿತ್ತು.</p>.<p>ಪಾಲಿಕೆ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ನೇತೃತ್ವದಲ್ಲಿ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಲಾಯಿತು. ಇದಕ್ಕಾಗಿ ಪಾಲಿಕೆಯ ಬೃಹತ್ ಗಾತ್ರದ ಕ್ರೇನ್ ಅನ್ನು ಬಳಕೆ ಮಾಡಲಾಯಿತು. ಒಂದೂವರೆ ಗಂಟೆಗಳ ಕಾಲ ಇಎಸ್ಐ ಆಸ್ಪತ್ರೆಯಿಂದ ಬೆಂದೂರ್ ಮುಖ್ಯರಸ್ತೆವರೆಗಿನ ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗಿತ್ತು.</p>.<p>‘ಬೃಹತ್ ಕ್ರೇನ್ನಲ್ಲಿ ಇಬ್ಬರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಅವರು ಉದ್ದನೆಯ ಕೊಳವೆಗೆ ಸೀಮೆಎಣ್ಣೆ ಸುತ್ತಿ ಕಟ್ಟಿದ್ದ ಬಟ್ಟೆಗೆ ಬೆಂಕಿ ಹಚ್ಚಿ ಕಣಜದ ಗೂಡನ್ನು ನಾಶಪಡಿಸಿದರು.</p>.<p>ಕಾರ್ಯಾಚರಣೆಯ ಅವಧಿಯಲ್ಲಿ ಸುತ್ತಲಿನ ಮನೆಗಳ ವಿದ್ಯುತ್ ದೀಪಗಳನ್ನು ಆರಿಸಲಾಗಿತ್ತು. ಬೀದಿ ದೀಪಗಳನ್ನೂ ಆರಿಸಲಾಗಿತ್ತು’ ಎಂದು ಸ್ಥಳೀಯ ನಿವಾಸಿ ರಾಕೇಶ್ ಬೋಳಾರ್ ತಿಳಿಸಿದರು.</p>.<p>ಕಣಜದ ಗೂಡು ಸುಡುವಾಗ ತೆಂಗಿನ ಮರಕ್ಕೆ ಬೆಂಕಿ ತಗುಲಿದೆ. ಕಾರ್ಯಾಚರಣೆಗೆ ತೆರಳಿದವರು ಕ್ರೇನ್ನಲ್ಲಿ ನಿಂತುಕೊಂಡೇ ಬೆಂಕಿ ಆರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ನಗರದ ಲೋಯರ್ ಬೆಂದೂರು 3ನೇ ಅಡ್ಡರಸ್ತೆಯ ಡಾಮಿನೋಜ್ ಪಿಡ್ಜಾ ಕಾರ್ನರ್ ಸಮೀಪ ತೆಂಗಿನ ಮರದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿದ್ದ ಬೃಹತ್ ಕಣಜದ ಹುಳಗಳ (ಪಿಲಿಕುಂಡೆಲು) ಗೂಡನ್ನು ಮಂಗಳೂರು ಮಹಾನಗರ ಪಾಲಿಕೆ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಿ, ನಾಶಪಡಿಸಿದೆ.</p>.<p>ಗುರುಪುರ ಅಣ್ಣಪ್ಪ ಪ್ರಭು ಎಂಬುವವರ ಮನೆಯ ಆವರಣದಲ್ಲಿನ ತೆಂಗಿನ ಮರದಲ್ಲಿ ದೊಡ್ಡ ಗಾತ್ರದ ಕಣಜದ ಹುಳುಗಳು ಗೂಡು ಕಟ್ಟಿದ್ದವು. ಈ ಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದರೆ ಸಾವು ಕೂಡ ಸಂಭವಿಸುವ ಅಪಾಯವಿದೆ. ಈ ಕಾರಣದಿಂದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದರು. ಸೆಪ್ಟೆಂಬರ್ 18ರ ಸಂಚಿಕೆಯಲ್ಲಿ ‘ಪ್ರಜಾವಾಣಿ’ ಈ ಬಗ್ಗೆ ಚಿತ್ರಸಹಿತ ವರದಿ ಪ್ರಕಟಿಸಿತ್ತು.</p>.<p>ಪತ್ರಿಕೆಯ ವರದಿ ಬಳಿಕ ಕಣಜದ ಗೂಡುಗಳ ತೆರವು ಕಾರ್ಯಾಚರಣೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು. ಮರ ಹತ್ತುವುದರಲ್ಲಿ ಅನುಭವಿಗಳಾಗಿರುವ ಕೆಲವರನ್ನು ಶುಕ್ರವಾರ ಕರೆತರಲಾಗಿತ್ತು. ಆದರೆ, ಅವರಿಗೂ ಕಣಜದ ಗೂಡು ತೆರವು ಮಾಡಲು ಸಾಧ್ಯವಾಗಿರಲಿಲ್ಲ. ಅರ್ಧದಲ್ಲೇ ಕಾರ್ಯಾಚರಣೆ ಕೈಬಿಡಲಾಗಿತ್ತು.</p>.<p>ಪಾಲಿಕೆ ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ ನೇತೃತ್ವದಲ್ಲಿ ಶನಿವಾರ ರಾತ್ರಿ ಕಾರ್ಯಾಚರಣೆ ನಡೆಸಲಾಯಿತು. ಇದಕ್ಕಾಗಿ ಪಾಲಿಕೆಯ ಬೃಹತ್ ಗಾತ್ರದ ಕ್ರೇನ್ ಅನ್ನು ಬಳಕೆ ಮಾಡಲಾಯಿತು. ಒಂದೂವರೆ ಗಂಟೆಗಳ ಕಾಲ ಇಎಸ್ಐ ಆಸ್ಪತ್ರೆಯಿಂದ ಬೆಂದೂರ್ ಮುಖ್ಯರಸ್ತೆವರೆಗಿನ ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗಿತ್ತು.</p>.<p>‘ಬೃಹತ್ ಕ್ರೇನ್ನಲ್ಲಿ ಇಬ್ಬರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಅವರು ಉದ್ದನೆಯ ಕೊಳವೆಗೆ ಸೀಮೆಎಣ್ಣೆ ಸುತ್ತಿ ಕಟ್ಟಿದ್ದ ಬಟ್ಟೆಗೆ ಬೆಂಕಿ ಹಚ್ಚಿ ಕಣಜದ ಗೂಡನ್ನು ನಾಶಪಡಿಸಿದರು.</p>.<p>ಕಾರ್ಯಾಚರಣೆಯ ಅವಧಿಯಲ್ಲಿ ಸುತ್ತಲಿನ ಮನೆಗಳ ವಿದ್ಯುತ್ ದೀಪಗಳನ್ನು ಆರಿಸಲಾಗಿತ್ತು. ಬೀದಿ ದೀಪಗಳನ್ನೂ ಆರಿಸಲಾಗಿತ್ತು’ ಎಂದು ಸ್ಥಳೀಯ ನಿವಾಸಿ ರಾಕೇಶ್ ಬೋಳಾರ್ ತಿಳಿಸಿದರು.</p>.<p>ಕಣಜದ ಗೂಡು ಸುಡುವಾಗ ತೆಂಗಿನ ಮರಕ್ಕೆ ಬೆಂಕಿ ತಗುಲಿದೆ. ಕಾರ್ಯಾಚರಣೆಗೆ ತೆರಳಿದವರು ಕ್ರೇನ್ನಲ್ಲಿ ನಿಂತುಕೊಂಡೇ ಬೆಂಕಿ ಆರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>