<p><strong>ಬೆಂಗಳೂರು: </strong>ಶಾಲಾ, ಕಾಲೇಜುಗಳಲ್ಲಿ ಸುಸ್ಥಿರ ಶಿಕ್ಷಣ ಗುರುತಿಸಿ ಪ್ರೋತ್ಸಾಹಿಸಲು ವಿಪ್ರೊ ನೀಡುವ 2017ನೇ ಸಾಲಿನ ‘ಆರ್ಥಿಯನ್’ ಪ್ರಶಸ್ತಿ ದೇಶದ 11 ಶಾಲೆಗಳು ಮತ್ತು 8 ಕಾಲೇಜುಗಳಿಗೆ ಲಭಿಸಿದೆ.</p>.<p>ನಗರದ ಸರ್ಜಾಪುರದಲ್ಲಿರುವ ವಿಪ್ರೊ ಕ್ಯಾಂಪಸ್ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ಜಿ ಅವರು ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಒಳಗೊಂಡ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.</p>.<p>ಸಂಸ್ಥೆಯ 7ನೇ ವರ್ಷದ ಆರ್ಥಿಯನ್ ಪ್ರಶಸ್ತಿಗೆ ದೇಶದ ನಾನಾ ಶಾಲಾ-ಕಾಲೇಜುಗಳಿಂದ 1,200 ಪ್ರವೇಶಗಳು ಬಂದಿದ್ದವು. ಅದರಲ್ಲಿ ತೀರ್ಪುಗಾರರು 11 ಶಾಲೆಗಳು ಮತ್ತು 8 ಕಾಲೇಜು ತಂಡಗಳನ್ನು ಆಯ್ಕೆ ಮಾಡಿದ್ದಾರೆ.</p>.<p>‘ಶಾಲಾ ವಿಭಾಗದ ಪ್ರಶಸ್ತಿಗೆ ಈ ಬಾರಿ ನೀರು ಮತ್ತು ಜೀವವೈವಿಧ್ಯ ಅರ್ಥ ಮಾಡಿಕೊಳ್ಳುವ ವಿಷಯ ಕುರಿತ ಪ್ರಬಂಧಗಳನ್ನು ಆಹ್ವಾನಿಸಲಾಗಿತ್ತು. ಕಾಲೇಜು ವಿಭಾಗದ ಪ್ರಶಸ್ತಿಗೆ ಸುಸ್ಥಿರ ನಗರ ಅಭಿವೃದ್ಧಿಯಲ್ಲಿ ನೀರು, ತ್ಯಾಜ್ಯ ನಿರ್ವಹಣೆ ಕುರಿತ ವಿಷಯ ನೀಡಲಾಗಿತ್ತು’ ಎಂದು ವಿಪ್ರೊ ಸುಸ್ಥಿರ ವಿಭಾಗದ ಮುಖ್ಯಸ್ಥ ಅನುರಾಗ್ ಬೇಹರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಶಾಲಾ, ಕಾಲೇಜುಗಳಲ್ಲಿ ಸುಸ್ಥಿರ ಶಿಕ್ಷಣ ಗುರುತಿಸಿ ಪ್ರೋತ್ಸಾಹಿಸಲು ವಿಪ್ರೊ ನೀಡುವ 2017ನೇ ಸಾಲಿನ ‘ಆರ್ಥಿಯನ್’ ಪ್ರಶಸ್ತಿ ದೇಶದ 11 ಶಾಲೆಗಳು ಮತ್ತು 8 ಕಾಲೇಜುಗಳಿಗೆ ಲಭಿಸಿದೆ.</p>.<p>ನಗರದ ಸರ್ಜಾಪುರದಲ್ಲಿರುವ ವಿಪ್ರೊ ಕ್ಯಾಂಪಸ್ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ಜಿ ಅವರು ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಒಳಗೊಂಡ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.</p>.<p>ಸಂಸ್ಥೆಯ 7ನೇ ವರ್ಷದ ಆರ್ಥಿಯನ್ ಪ್ರಶಸ್ತಿಗೆ ದೇಶದ ನಾನಾ ಶಾಲಾ-ಕಾಲೇಜುಗಳಿಂದ 1,200 ಪ್ರವೇಶಗಳು ಬಂದಿದ್ದವು. ಅದರಲ್ಲಿ ತೀರ್ಪುಗಾರರು 11 ಶಾಲೆಗಳು ಮತ್ತು 8 ಕಾಲೇಜು ತಂಡಗಳನ್ನು ಆಯ್ಕೆ ಮಾಡಿದ್ದಾರೆ.</p>.<p>‘ಶಾಲಾ ವಿಭಾಗದ ಪ್ರಶಸ್ತಿಗೆ ಈ ಬಾರಿ ನೀರು ಮತ್ತು ಜೀವವೈವಿಧ್ಯ ಅರ್ಥ ಮಾಡಿಕೊಳ್ಳುವ ವಿಷಯ ಕುರಿತ ಪ್ರಬಂಧಗಳನ್ನು ಆಹ್ವಾನಿಸಲಾಗಿತ್ತು. ಕಾಲೇಜು ವಿಭಾಗದ ಪ್ರಶಸ್ತಿಗೆ ಸುಸ್ಥಿರ ನಗರ ಅಭಿವೃದ್ಧಿಯಲ್ಲಿ ನೀರು, ತ್ಯಾಜ್ಯ ನಿರ್ವಹಣೆ ಕುರಿತ ವಿಷಯ ನೀಡಲಾಗಿತ್ತು’ ಎಂದು ವಿಪ್ರೊ ಸುಸ್ಥಿರ ವಿಭಾಗದ ಮುಖ್ಯಸ್ಥ ಅನುರಾಗ್ ಬೇಹರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>