ಇದು ಈ ಪ್ರದೇಶದ ಅತ್ಯಂತ ಜನನಿಬಿಡ ರೈಲ್ವೆ ಜಂಕ್ಷನ್ ಆಗಿದ್ದು, ಉತ್ತರ ಮತ್ತು ದಕ್ಷಿಣದ ರೈಲುಗಳು ಈ ನಿಲ್ದಾಣದ ಮೂಲಕ ಮಂಗಳೂರು ತಲುಪುತ್ತವೆ. ಸೋಮವಾರ ರಾತ್ರಿಯೂ ಉತ್ತರಭಾರತ ಹಾಗೂ ಕೇರಳಕ್ಕೆ ತೆರಳುವ ರೈಲನ್ನೇರಲು ಸಾವಿರಕ್ಕಿಂತಲೂ ಅಧಿಕ ಪ್ರಯಾಣಿಕರಿದ್ದರು. ಅದರೆ ಸಂಜೆ 7 ರ ಸುಮಾರಿಗೆ ರೈಲು ನಿಲ್ದಾಣದಲ್ಲಿ ವಿದ್ಯುತ್ ಹೋಗಿತ್ತು. ಅದರ ಬದಲಿಗೆ ಕಾರ್ಯಾಚರಿಸಬೇಕಾದ ಜನರೇಟರ್ ಕಾರ್ಯಾಚರಿಸದೇ, ಇಡೀ ರೈಲು ನಿಲ್ದಾಣ ಕತ್ತಲೆಯಲ್ಲಿ ಮುಳುಗಿತ್ತು.