<p><strong>ಮಂಗಳೂರು:</strong> ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ಮುಂಬೈ- ಮಂಗಳೂರು ಸೆಂಟ್ರಲ್ (ರೈಲು ನಂ.02620/02619) ದೈನಂದಿನ ಹಬ್ಬದ ವಿಶೇಷ ರೈಲು ಸಂಚಾರವನ್ನು ದಕ್ಷಿಣ ರೈಲ್ವೆಯ ಸಹಯೋಗದೊಂದಿಗೆ ಜೂ.15ರಿಂದ ಪುನರಾರಂಭಿಸುವುದಾಗಿ ಕೊಂಕಣ ರೈಲ್ವೆ ತಿಳಿಸಿದೆ.</p>.<p>ಮಂಗಳೂರು ಸೆಂಟ್ರಲ್-ಮುಂಬೈ ದೈನಂದಿನ ಸೂಪರ್ಫಾಸ್ಟ್ ರೈಲು ಜೂ.15ರಿಂದ 30ರವರೆಗೆ ನಿತ್ಯ ಮಧ್ಯಾಹ್ನ 12.40ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 6.35ಕ್ಕೆ ಮುಂಬೈ ತಲುಪಲಿದೆ. ಜೂ.16ರಿಂದ ಜುಲೈ1ರವರೆಗೆ ನಿತ್ಯ ಮಧ್ಯಾಹ್ನ 3.20ಕ್ಕೆ ಮುಂಬೈಯಿಂದ ಹೊರಡುವ ಈ ರೈಲು, ಮರುದಿನ ಬೆಳಿಗ್ಗೆ 10.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.</p>.<p>ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ, ಮಡಗಾಂ ಜಂಕ್ಷನ್, ಕುಡಾಲ್, ರತ್ನಗಿರಿ, ಚಿಪ್ಳೂಣ್, ಪನ್ವೇಲ್ ಹಾಗೂ ಠಾಣೆ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಮುಂಬೈನಿಂದ ಬರುವಾಗ ಮಂಗೋನ್ ಹಾಗೂ ಖೇಡ್ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ಇರುತ್ತದೆ.</p>.<p>ಮುಂಗಡ ಸೀಟು ಕಾದಿರಿಸಿ ಈ ರೈಲಿನಲ್ಲಿ ಪ್ರಯಾಣಿಸಬೇಕು. ಮಾಸ್ಕ್ ಧರಿಸಿ, ಅಂತರ ಕಾಪಾಡುವುದು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಕೊಂಕಣ ರೈಲ್ವೆಯ ಉಪ ಮಹಾಪ್ರಬಂಧಕ ಗಿರೀಶ್ ಕರಂಡೀಕರಣ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ಮುಂಬೈ- ಮಂಗಳೂರು ಸೆಂಟ್ರಲ್ (ರೈಲು ನಂ.02620/02619) ದೈನಂದಿನ ಹಬ್ಬದ ವಿಶೇಷ ರೈಲು ಸಂಚಾರವನ್ನು ದಕ್ಷಿಣ ರೈಲ್ವೆಯ ಸಹಯೋಗದೊಂದಿಗೆ ಜೂ.15ರಿಂದ ಪುನರಾರಂಭಿಸುವುದಾಗಿ ಕೊಂಕಣ ರೈಲ್ವೆ ತಿಳಿಸಿದೆ.</p>.<p>ಮಂಗಳೂರು ಸೆಂಟ್ರಲ್-ಮುಂಬೈ ದೈನಂದಿನ ಸೂಪರ್ಫಾಸ್ಟ್ ರೈಲು ಜೂ.15ರಿಂದ 30ರವರೆಗೆ ನಿತ್ಯ ಮಧ್ಯಾಹ್ನ 12.40ಕ್ಕೆ ಮಂಗಳೂರು ಸೆಂಟ್ರಲ್ನಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 6.35ಕ್ಕೆ ಮುಂಬೈ ತಲುಪಲಿದೆ. ಜೂ.16ರಿಂದ ಜುಲೈ1ರವರೆಗೆ ನಿತ್ಯ ಮಧ್ಯಾಹ್ನ 3.20ಕ್ಕೆ ಮುಂಬೈಯಿಂದ ಹೊರಡುವ ಈ ರೈಲು, ಮರುದಿನ ಬೆಳಿಗ್ಗೆ 10.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.</p>.<p>ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ, ಮಡಗಾಂ ಜಂಕ್ಷನ್, ಕುಡಾಲ್, ರತ್ನಗಿರಿ, ಚಿಪ್ಳೂಣ್, ಪನ್ವೇಲ್ ಹಾಗೂ ಠಾಣೆ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಮುಂಬೈನಿಂದ ಬರುವಾಗ ಮಂಗೋನ್ ಹಾಗೂ ಖೇಡ್ ನಿಲ್ದಾಣಗಳಲ್ಲಿ ಹೆಚ್ಚುವರಿ ನಿಲುಗಡೆ ಇರುತ್ತದೆ.</p>.<p>ಮುಂಗಡ ಸೀಟು ಕಾದಿರಿಸಿ ಈ ರೈಲಿನಲ್ಲಿ ಪ್ರಯಾಣಿಸಬೇಕು. ಮಾಸ್ಕ್ ಧರಿಸಿ, ಅಂತರ ಕಾಪಾಡುವುದು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಕೊಂಕಣ ರೈಲ್ವೆಯ ಉಪ ಮಹಾಪ್ರಬಂಧಕ ಗಿರೀಶ್ ಕರಂಡೀಕರಣ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>