<p><strong>ಮಂಗಳೂರು</strong>: ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ 16 ಮನೆಗಳು ಅಪಾಯಕ್ಕೆ ಸಿಲುಕಿವೆ. ಬೇರೆ ಕಡೆಗೆ ಸ್ಥಳಾಂತರಗೊಳ್ಳುವಂತೆ ಸಂತ್ರಸ್ತ ಕುಟುಂಬಗಳಿಗೆ ಪಾಲಿಕೆ ಸೂಚನೆ ನೀಡಿದೆ.</p>.<p>‘ಕೆತ್ತಿಕಲ್ನಲ್ಲಿ 12 ಮನೆಗಳು ಹಾಗೂ ಕಣ್ಣೂರಿನ ಬಳ್ಳೂರುಗುಡ್ಡೆಯಲ್ಲಿ 4 ಮನೆಗಳು ಮಳೆಯಿಂದಾಗಿ ಅಪಾಯಕ್ಕೆ ಸಿಲುಕಿವೆ. ಬೇರೆಡೆ ಸ್ಥಳಾಂತರಗೊಳ್ಳುವಂತೆ ಈ ಕುಟುಂಬಗಳಿಗೆ ಸೂಚಿಸಿದ್ದೇವೆ’ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. </p>.<p>ಅವರಿಗೆ ಬಾಡಿಗೆ ಮೊತ್ತ ಮರುಪಾವತಿಗೆ ಮಾಡುವಿರಾ ಎಂಬ ಪ್ರಶ್ನೆಗೆ ’ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿದರೆ ನೀಡುತ್ತೇವೆ. ಪಾಲಿಕೆ ಬಳಿ ಹಣವಿಲ್ಲ’ ಎಂದರು.</p>.<p>‘ಕೆತ್ತಿಕಲ್ನಲ್ಲಿ ಪಾಲಿಕೆ ನಿರ್ಮಿಸುತ್ತಿರುವ ವೆಟ್ವೆಲ್ ಅನ್ನು ಸುರತ್ಕಲ್ ಎನ್ಐಟಿಕೆ ತಜ್ಞರು ಪರಿಶೀಲಿಸಲಿದ್ದಾರೆ. ಅವರು ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ ಅಲ್ಲಿ ಕಾಮಗಾರಿ ಮುಂದುವರಿಸಬೇಕೋ ಬೇಡವೋ ಎಂದು ನಿರ್ಧರಿಸುತ್ತೇವೆ’ ಎಂದು ತಿಳಿಸಿದರು.</p>.<p>‘ವಾರ್ಡ್ ಸಮಿತಿ ಉಪವಿಧಿಗಳ (ಬೈಲಾ) ಕರಡಿನಲ್ಲಿ ಕೆಲವೊಂದು ಲೋಪಗಳಿದ್ದವು. ಆ ಕರಡನ್ನು ಪರಿಷ್ಕರಿಸಿದ್ದು, ಪಾಲಿಕೆಯ ಮುಂದಿನ ಸಭೆಯಲ್ಲಿ ಮಂಡಿಸಲಿದ್ದೇವೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ 16 ಮನೆಗಳು ಅಪಾಯಕ್ಕೆ ಸಿಲುಕಿವೆ. ಬೇರೆ ಕಡೆಗೆ ಸ್ಥಳಾಂತರಗೊಳ್ಳುವಂತೆ ಸಂತ್ರಸ್ತ ಕುಟುಂಬಗಳಿಗೆ ಪಾಲಿಕೆ ಸೂಚನೆ ನೀಡಿದೆ.</p>.<p>‘ಕೆತ್ತಿಕಲ್ನಲ್ಲಿ 12 ಮನೆಗಳು ಹಾಗೂ ಕಣ್ಣೂರಿನ ಬಳ್ಳೂರುಗುಡ್ಡೆಯಲ್ಲಿ 4 ಮನೆಗಳು ಮಳೆಯಿಂದಾಗಿ ಅಪಾಯಕ್ಕೆ ಸಿಲುಕಿವೆ. ಬೇರೆಡೆ ಸ್ಥಳಾಂತರಗೊಳ್ಳುವಂತೆ ಈ ಕುಟುಂಬಗಳಿಗೆ ಸೂಚಿಸಿದ್ದೇವೆ’ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. </p>.<p>ಅವರಿಗೆ ಬಾಡಿಗೆ ಮೊತ್ತ ಮರುಪಾವತಿಗೆ ಮಾಡುವಿರಾ ಎಂಬ ಪ್ರಶ್ನೆಗೆ ’ರಾಜ್ಯ ಸರ್ಕಾರ ಅನುದಾನ ಮಂಜೂರು ಮಾಡಿದರೆ ನೀಡುತ್ತೇವೆ. ಪಾಲಿಕೆ ಬಳಿ ಹಣವಿಲ್ಲ’ ಎಂದರು.</p>.<p>‘ಕೆತ್ತಿಕಲ್ನಲ್ಲಿ ಪಾಲಿಕೆ ನಿರ್ಮಿಸುತ್ತಿರುವ ವೆಟ್ವೆಲ್ ಅನ್ನು ಸುರತ್ಕಲ್ ಎನ್ಐಟಿಕೆ ತಜ್ಞರು ಪರಿಶೀಲಿಸಲಿದ್ದಾರೆ. ಅವರು ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ ಅಲ್ಲಿ ಕಾಮಗಾರಿ ಮುಂದುವರಿಸಬೇಕೋ ಬೇಡವೋ ಎಂದು ನಿರ್ಧರಿಸುತ್ತೇವೆ’ ಎಂದು ತಿಳಿಸಿದರು.</p>.<p>‘ವಾರ್ಡ್ ಸಮಿತಿ ಉಪವಿಧಿಗಳ (ಬೈಲಾ) ಕರಡಿನಲ್ಲಿ ಕೆಲವೊಂದು ಲೋಪಗಳಿದ್ದವು. ಆ ಕರಡನ್ನು ಪರಿಷ್ಕರಿಸಿದ್ದು, ಪಾಲಿಕೆಯ ಮುಂದಿನ ಸಭೆಯಲ್ಲಿ ಮಂಡಿಸಲಿದ್ದೇವೆ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>