ಏಪ್ರಿಲ್ 24ರಂದು ಸಾಮೂಹಿಕ ವಿವಾಹ: ‘ರಾಜ್ಯ ಮುಜರಾಯಿ ಇಲಾಖೆಯ ವತಿಯಿಂದ ಏಪ್ರಿಲ್ 24ರಂದು ರಾಜ್ಯದ 100 ದೇವಳಗಳಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ವಧುವರರಿಗೆ ₹55 ಸಾವಿರ ಹಣ, ವಧುವಿಗೆ ₹40 ಸಾವಿರ ಮೌಲ್ಯದ 8 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಹಾಗೂ ಧಾರೆ ಸೀರೆಗೆ ₹10 ಸಾವಿರ, ವರನಿಗೆ ಪಂಚೆಗೆ ₹5 ಸಾವಿರ ನೀಡಲಾಗುವುದು. ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುವುದು. ಶಿಶು ಕಲ್ಯಾಣ ಇಲಾಖೆಯ ವತಿಯಿಂದಲೂ ₹10 ಸಾವಿರ ನಗದು ಹಣ ಕೊಡಿಸುವ ಕೆಲಸ ಮಾಡಲಾಗುವುದು. ಮಾಂಗಲ್ಯವನ್ನು ಅವ್ಯವಹಾರ ರಹಿತವಾಗಿ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ನೀಡುವ ವ್ಯವಸ್ಥೆ ಮಾಡಬೇಕೇ ಅಥವಾ ಜ್ಯುವೆಲ್ಲರಿಗೆ ಮಳಿಗೆ ಮೂಲಕ ಖರೀದಿಸಿ ಕೊಡಬೇಕೇ ಎಂಬ ಕುರಿತು ಚಿಂತನೆ ನಡೆದಿದೆ’ ಎಂದ ಸಚಿವರು ತಿಳಿಸಿದರು.