ಮೋಹನ್ದಾಸ್ ಕಾಮತ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಮುರಳೀಧರನ್ ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಟ್ವಿಟರ್ ಖಾತೆಗಳನ್ನು ಟ್ಯಾಗ್ ಮಾಡಿ ಈ ವಿಷಯ ತಿಳಿಸಿದರು. ಜತೆಗೆ ಕೇಂದ್ರದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರ ಆಪ್ತ ಸಹಾಯಕ ಅಭಿಷೇಕ್ ಅವರನ್ನು ಸಂಪರ್ಕಿಸಿದರು. ಕೇಂದ್ರ ವಿದೇಶಾಂಗ ಸಚಿವಾಲಯವನ್ನು ತಕ್ಷಣ ಸಂಪರ್ಕಿಸಿ ಸಮಸ್ಯೆಗೆ ಸ್ಪಂದಿಸುವಂತೆ ಶೋಭಾ, ಆಪ್ತ ಸಹಾಯಕರಿಗೆ ಸೂಚಿಸಿದರು. ಕೆಲವೇ ಹೊತ್ತಿನಲ್ಲಿ ಸಮಸ್ಯೆಗೆ ಪರಿಹಾರ ದೊರೆತು, ಅದಿತಿ ಮಗು ಜೊತೆ, ನಿಗದಿತ ವಿಮಾನದಲ್ಲೇ ಪ್ರಯಾಣಿಸಿ, ಮಂಗಳೂರು ತಲುಪಿದರು.