<p><strong>ಮಂಗಳೂರು:</strong> ಇಲ್ಲಿನ ಪೋಷಕರಿಗೆ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಕೇಳವಂತಹ ತಿಳಿವಳಿಕೆ ಇಲ್ಲ ಎಂದು ಶಾಸಕ ಸುನಿಲಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.</p>.<p>ಇಲ್ಲಿನ ನೆಹರೂ ಮೈದಾನದಲ್ಲಿ ಆಯೋಜಿಸಲಾದ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿಭಾಗವಹಿಸಿದ್ದರು.</p>.<p><strong>ಇದನ್ನೂ ಓದಿ: </strong>‘<a href="https://cms.prajavani.net/district/dakshina-kannada/pm-modi-mangalore-628501.html" target="_blank">ಅವರದು ವಂಶೋದಯ,ನಮ್ಮದು ಅಂತ್ಯೋದಯ’– ಮಂಗಳೂರಿನಲ್ಲಿ ಪ್ರಧಾನಿ ಮೋದಿ</a></p>.<p>ಕಾಂಗ್ರೆಸ್ ಅಭ್ಯರ್ಥಿ ಕೇಸರಿ ಶಾಲು ಹಾಕಿಕೊಳ್ಳುತ್ತಿದ್ದು, ರಾಹುಲ್ ಅವರು ಜನಿವಾರ ಹಾಕಿಕೊಂಡು ದೇವಸ್ಥಾನಗಳ ಸುತ್ತಾಟ ಮಾಡುತ್ತಿದ್ದಾರೆ. ಇದೇ ಅಚ್ಛೇದಿನ್ ಎಂದರು.</p>.<p>ಸಿ.ಟಿ. ರವಿ ಮಾತನಾಡಿ, ರಾಮ ಹಾಗೂ ಡಾ. ಅಂಬೇಡ್ಕರ್ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ದಲಿತರಿಂದ ಬೇರ್ಪಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ ಇದು ಸಾಧ್ಯವಿಲ್ಲ ಕಂಬಾಳಪಲ್ಲಿಯಲ್ಲಿ ದಲಿತರ ಹತ್ಯಾಕಾಂಡ ನಡೆದಾಗ ಯಾರುಆಡಳಿತ ನಡೆಸಿದ್ದರು ಎಂದು ಪ್ರಶ್ನಿಸಿದರು.</p>.<p>ಕುಟುಂಬ ರಾಜಕಾರಣ- ಪ್ರಜಾಪ್ರಭುತ್ವದ ನಡುವಿನ, ಜಾತಿವಾದಿಗಳು- ರಾಷ್ಟ್ರವಾದಿಗಳ ನಡುವಿನ ಚುನಾವಣೆ. ಕೇರಳದಲ್ಲಿ ರಾಹುಲ್ ಗಾಂಧಿ ಅವರು ಹಣೆ ತುಂಬ ಕುಂಕುಮ ಇಟ್ಟುಕೊಂಡು, ಹರಕೆಯ ಕುರಿಯಂತೆ ಕಾಣುತ್ತಿದ್ದರು ಎಂದು ಟೀಕಿಸಿದರು.</p>.<p>ಹೊಟ್ಟೆಗೆ ಇಲ್ಲದವರು ಸೇನೆ ಸೇರುತ್ತಾರೆ ಎಂದಿರುವ ಕುಮಾರಸ್ವಾಮಿ ಅವರ ಜೆಡಿಎಸ್ಗೆಸೇರೋರು ಮೂರೂ ಬಿಟ್ಟೋರು ತಾನೆ? ಎಂದು ಲೇವಡಿ ಮಾಡಿದರು.</p>.<p>ಬ್ರೇಕ್ ಇನ್ ಇಂಡಿಯಾ, ಮೇಕ್ ಇಂಡಿಯಾ ನಡುವಿನ ಚುನಾವಣೆ. ಮೇಕ್ ಇನ್ ಇಂಡಿಯಾ ನೇತೃತ್ವ ಮೋದಿ ಅವರದ್ದು. ಬ್ರೇಕ್ ಇನ್ ಇಂಡಿಯಾ ನೇತೃತ್ವ ತುಕಡೆ ಗ್ಯಾಂಗ್ ನದ್ದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಇಲ್ಲಿನ ಪೋಷಕರಿಗೆ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಕೇಳವಂತಹ ತಿಳಿವಳಿಕೆ ಇಲ್ಲ ಎಂದು ಶಾಸಕ ಸುನಿಲಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.</p>.<p>ಇಲ್ಲಿನ ನೆಹರೂ ಮೈದಾನದಲ್ಲಿ ಆಯೋಜಿಸಲಾದ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿಭಾಗವಹಿಸಿದ್ದರು.</p>.<p><strong>ಇದನ್ನೂ ಓದಿ: </strong>‘<a href="https://cms.prajavani.net/district/dakshina-kannada/pm-modi-mangalore-628501.html" target="_blank">ಅವರದು ವಂಶೋದಯ,ನಮ್ಮದು ಅಂತ್ಯೋದಯ’– ಮಂಗಳೂರಿನಲ್ಲಿ ಪ್ರಧಾನಿ ಮೋದಿ</a></p>.<p>ಕಾಂಗ್ರೆಸ್ ಅಭ್ಯರ್ಥಿ ಕೇಸರಿ ಶಾಲು ಹಾಕಿಕೊಳ್ಳುತ್ತಿದ್ದು, ರಾಹುಲ್ ಅವರು ಜನಿವಾರ ಹಾಕಿಕೊಂಡು ದೇವಸ್ಥಾನಗಳ ಸುತ್ತಾಟ ಮಾಡುತ್ತಿದ್ದಾರೆ. ಇದೇ ಅಚ್ಛೇದಿನ್ ಎಂದರು.</p>.<p>ಸಿ.ಟಿ. ರವಿ ಮಾತನಾಡಿ, ರಾಮ ಹಾಗೂ ಡಾ. ಅಂಬೇಡ್ಕರ್ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ದಲಿತರಿಂದ ಬೇರ್ಪಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ ಇದು ಸಾಧ್ಯವಿಲ್ಲ ಕಂಬಾಳಪಲ್ಲಿಯಲ್ಲಿ ದಲಿತರ ಹತ್ಯಾಕಾಂಡ ನಡೆದಾಗ ಯಾರುಆಡಳಿತ ನಡೆಸಿದ್ದರು ಎಂದು ಪ್ರಶ್ನಿಸಿದರು.</p>.<p>ಕುಟುಂಬ ರಾಜಕಾರಣ- ಪ್ರಜಾಪ್ರಭುತ್ವದ ನಡುವಿನ, ಜಾತಿವಾದಿಗಳು- ರಾಷ್ಟ್ರವಾದಿಗಳ ನಡುವಿನ ಚುನಾವಣೆ. ಕೇರಳದಲ್ಲಿ ರಾಹುಲ್ ಗಾಂಧಿ ಅವರು ಹಣೆ ತುಂಬ ಕುಂಕುಮ ಇಟ್ಟುಕೊಂಡು, ಹರಕೆಯ ಕುರಿಯಂತೆ ಕಾಣುತ್ತಿದ್ದರು ಎಂದು ಟೀಕಿಸಿದರು.</p>.<p>ಹೊಟ್ಟೆಗೆ ಇಲ್ಲದವರು ಸೇನೆ ಸೇರುತ್ತಾರೆ ಎಂದಿರುವ ಕುಮಾರಸ್ವಾಮಿ ಅವರ ಜೆಡಿಎಸ್ಗೆಸೇರೋರು ಮೂರೂ ಬಿಟ್ಟೋರು ತಾನೆ? ಎಂದು ಲೇವಡಿ ಮಾಡಿದರು.</p>.<p>ಬ್ರೇಕ್ ಇನ್ ಇಂಡಿಯಾ, ಮೇಕ್ ಇಂಡಿಯಾ ನಡುವಿನ ಚುನಾವಣೆ. ಮೇಕ್ ಇನ್ ಇಂಡಿಯಾ ನೇತೃತ್ವ ಮೋದಿ ಅವರದ್ದು. ಬ್ರೇಕ್ ಇನ್ ಇಂಡಿಯಾ ನೇತೃತ್ವ ತುಕಡೆ ಗ್ಯಾಂಗ್ ನದ್ದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>