ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರುನ ಮೊಬೈಲ್ ಟವರ್: ಸಾಮಗ್ರಿ ಕಳವು

Last Updated 1 ಫೆಬ್ರುವರಿ 2023, 6:07 IST
ಅಕ್ಷರ ಗಾತ್ರ

ಮಂಗಳೂರು: ಮೊಬೈಲ್‌ ಟವರ್‌ ನಿರ್ಮಾಣಕ್ಕಾಗಿ ನಗರದ ಅಡ್ಯಾರ್ ಗ್ರಾಮದ ಆರ್.ಕೆ.ಕಂಪೌಂಡಿನಲ್ಲಿರುವ ಆನಂದ ಟ್ರೇಡರ್ಸ್ ಮಳಿಗೆಯ ಬಳಿ ತಂದು ಹಾಕಿದ್ದ ಸೊತ್ತುಗಳು ಕಳವಾದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನವ ಮುಂಬೈ ಕೈಗಾರಿಕಾ ವಲಯದಲ್ಲಿರುವ ಜಿ.ಟಿ.ಎಲ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯವರು ಮೊಬೈಲ್‌ ಟವರ್‌ ನಿರ್ಮಿಸಲು 2019ರಲ್ಲಿ ಅಡ್ಯಾರ್‌ನ ಆನಂದ ಟ್ರೇಡರ್ಸ್ ಮಳಿಗೆಯ ಬಳಿ ಸಾಮಗ್ರಿಗಳನ್ನು ತಂದು ಹಾಕಿದ್ದರು. ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್‌ ಹೇರಿದ್ದರಿಂದ ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. 2002ರಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಈ ಸೊತ್ತುಗಳನ್ನು ಯಾರೋ ಕದ್ದೊಯ್ದದ್ದು ಕಂಡುಬಂದಿತ್ತು. ಒಟ್ಟು ₹ 30,16,415 ಮೌಲ್ಯದ ಸ್ವತ್ತುಗಳನ್ನು ತಂದು ಹಾಕಲಾಗಿತ್ತು ಎಂದು ಈ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುವ ಸಂದೀಪ್‌ ಅವರು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT