‘ನವ ಮುಂಬೈ ಕೈಗಾರಿಕಾ ವಲಯದಲ್ಲಿರುವ ಜಿ.ಟಿ.ಎಲ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯವರು ಮೊಬೈಲ್ ಟವರ್ ನಿರ್ಮಿಸಲು 2019ರಲ್ಲಿ ಅಡ್ಯಾರ್ನ ಆನಂದ ಟ್ರೇಡರ್ಸ್ ಮಳಿಗೆಯ ಬಳಿ ಸಾಮಗ್ರಿಗಳನ್ನು ತಂದು ಹಾಕಿದ್ದರು. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ಡೌನ್ ಹೇರಿದ್ದರಿಂದ ಅವರು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. 2002ರಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಈ ಸೊತ್ತುಗಳನ್ನು ಯಾರೋ ಕದ್ದೊಯ್ದದ್ದು ಕಂಡುಬಂದಿತ್ತು. ಒಟ್ಟು ₹ 30,16,415 ಮೌಲ್ಯದ ಸ್ವತ್ತುಗಳನ್ನು ತಂದು ಹಾಕಲಾಗಿತ್ತು ಎಂದು ಈ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುವ ಸಂದೀಪ್ ಅವರು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.