ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ದಕ್ಷಿಣ ಕನ್ನಡ: ಹಳ್ಳಿಗಳ ‘ಜೀವ’ ಹಿಂಡುತ್ತಿರುವ ಮಣ್ಣು ‘ಲಾಬಿ’

ಗ್ರಾಮ ಪಂಚಾಯಿತಿಗಳ ಜೈವಿಕ ವೈವಿಧ್ಯ ಉಪಸಮಿತಿ ಲೆಕ್ಕಕ್ಕಷ್ಟೆ; ಹೆದ್ದಾರಿ ಬದಿಯಲ್ಲೂ ಕರಗುತ್ತಿವೆ ಗುಡ್ಡಗಳು
Published : 22 ಜುಲೈ 2024, 8:23 IST
Last Updated : 22 ಜುಲೈ 2024, 8:23 IST
ಫಾಲೋ ಮಾಡಿ
Comments
ಜೀವವೈವಿಧ್ಯದ ಆಗರವನ್ನು ಬಗೆದಿರುವುದು
ಜೀವವೈವಿಧ್ಯದ ಆಗರವನ್ನು ಬಗೆದಿರುವುದು
ನಕಾಶೆಯ ತುಂಬ ‘ಪ್ಯಾಚ್‌’ಗಳು
ಗುಡ್ಡಗಳನ್ನು ಕೊರೆಯುವುದು ಅವ್ಯಾಹತವಾಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲು ಹೊರಟ ಪಕ್ಷಿಕೆರೆಯ ತಂಡವೊಂದು ಗೂಗಲ್ ಅರ್ಥ್‌ನಲ್ಲಿ ಪರಿಶೀಲಿಸಿದಾಗ ನಕಾಶೆಯ ತುಂಬ ‘ಪ್ಯಾಚ್‌’ಗಳೇ ಕಾಣಿಸಿಕೊಂಡಿವೆ. ಸುರತ್ಕಲ್ ಸುತ್ತಮುತ್ತ ನೂರಾರು ಎಕರೆ ಭೂಮಿಯಲ್ಲಿ ಇಂಥ ಕಪ್ಪುಬೊಟ್ಟುಗಳು ಕಂಡುಬಂದಿವೆ ಎಂದು ತಂಡದ ಪ್ರಮುಖ ನಿತಿನ್ ವಾಜ್ ಹೇಳುತ್ತಾರೆ. ‘ಗುಡ್ಡ ಉರುಳಿಸುವುದರಿಂದ ಹಸಿರು ನಾಶವಾಗುತ್ತದೆ. ಮಣ್ಣು ಕೂಡ ಇಲ್ಲದಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಶವಾದ ಭಾಗವನ್ನು ಸರಿಪಡಿಸಲು ಪ್ರಯತ್ನ ನಡೆಯುತ್ತಿದೆ. ಚೇಳಾಯ್ರು ಸಮೀಪ ಇಂಥ ಪ್ರದೇಶವೊಂದನ್ನು ಗುರುತಿಸಿ ಜೈವಿಕ ವೈವಿಧ್ಯ ಉದ್ಯಾನ ನಿರ್ಮಿಸಲಾಗುತ್ತಿದೆ. ನೀರು ಹರಿಯುವ ಈ ಪ್ರದೇಶದಲ್ಲಿ ಚಿಕ್ಕದಾದ ಅಣೆಕಟ್ಟೆಯೊಂದನ್ನು ನಿರ್ಮಿಸಿ ನೀರು ನಿಲ್ಲಿಸುವ ಯೋಜನೆಯೂ ಇದೆ. ಇದರಿಂದ ಬೇಸಿಗೆಯಲ್ಲಿ ಒಂದಷ್ಟು ನೀರು ಸಿಗಲಿದೆ. ಈ ಪ್ರದೇಶದಲ್ಲಿ ಅಂತರ್ಜಲವೂ ಹೆಚ್ಚಲಿದೆ’ ಎಂದು ನಿತಿನ್ ತಿಳಿಸಿದರು.
ಭೂ ಪ್ರದೇಶದಕ್ಕೆ ಧಕ್ಕೆ
ಪ್ರಕ್ರತಿದತ್ತ ಗುಡ್ಡಗಳನ್ನು ಅಗೆದು ಸಮತಟ್ಟು ಮಾಡುವುದರಿಂದ ಭೂಪ್ರದೇಶದ ಅಂದಕ್ಕೆ ಧಕ್ಕೆಯಾಗುತ್ತದೆ. ನೈಸರ್ಗಿಕ ಪರಿಸರಕ್ಕೂ ತೊಂದರೆಯಾಗುತ್ತದೆ. ಇದರೊಂದಿಗೆ ಮಣ್ಣು ಕೊಚ್ಚಿಕೊಂಡು ಹೋಗಿ ಅನಾಹುತಗಳಾಗುತ್ತವೆ. ಮಣ್ಣಿನ ಫಲವತ್ತತೆ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ. ಈ ಎಲ್ಲ ಕಾರಣಗಳಿಂದ ಗುಡ್ಡ ಅಗೆಯುವುದರ ಮೇಲೆ ನಿರ್ಬಂಧ ಹೇರಬೇಕು. ಗುಡ್ಡಗಳಿಂದ ಮಣ್ಣು ತೆಗೆಯಬೇಕಾದರೆ ಸಂಬಂಧಪಟ್ಟವರ ಅನುಮತಿ ಬೇಕೇಬೇಕು. ಆದರೆ ನಮ್ಮ ಜಿಲ್ಲೆಯಲ್ಲಿ ಗುಡ್ಡ ಖಾಲಿ ಮಾಡುವ ಚಟುವಟಿಕೆ ಲಂಗು ಲಗಾಮು ಇಲ್ಲದೆ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಇನ್ನಷ್ಟು ಅಪಾಯಗಳು ಆಗಬಹುದು. ಎಚ್‌. ಶಶಿಧರ ಶೆಟ್ಟಿ ಎನ್‌ಇಸಿಎಫ್‌ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT