ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ನಾರಾಯಣ ಗುರು ಅಭಿವೃದ್ಧಿ ನಿಗಮದ ನೋಂದಾಯಿತ (ರಿಜಿಸ್ಟ್ರೇಷನ್ ) ಪ್ರಮಾಣಪತ್ರದ ಪ್ರತಿ, ಆರ್ಟಿಕಲ್ ಆನ್ ಅಸೋಸಿಯೇಷನ್, ಮೆಮೊರಾಂಡಮ್ ಆಫ್ ಅಸೋಸಿಯೇಷನ್, ಷೇರು ಬಂಡವಾಳದ ವಿವರ ಹಾಗೂ ನಿರ್ದೇಶಕರ ವಿವರಗಳ ಬಗ್ಗೆ ಮಂಜುನಾಥ್ ಅವರು ಮಾಹಿತಿ ಹಕ್ಕಿನಡಿ ವಿವರಗಳನ್ನು ಕೋರಿದ್ದರು. ನಿಗಮದ ಪ್ರಧಾನ ಕಚೇರಿಯ ವಿವರ ಹಾಗೂ ನಿಗಮಕ್ಕೆ ಈವರೆಗೆ ನೀಡಿರುವ ಹಾಗೂ ನೀಡಲು ಉದ್ದೇಶಿಸಿರುವ ಅನುದಾನದ ವಿವರಗಳ ಕುರಿತೂ ಮಾಹಿತಿ ಕೇಳಿದ್ದರು.