ಕರಾವಳಿಯಲ್ಲಿರುವ ಕ್ರೈಸ್ತರು ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಂಜೆಯಾಗುತ್ತಿದ್ದಂತೆ, ಕ್ರೈಸ್ತರು ಚರ್ಚ್ಗಳಲ್ಲಿ ಆರಾಧನೆ, ಬಲಿಪೂಜೆ ಸೇರಿದಂತೆ ವಿಶೇಷ ಪ್ರಾರ್ಥನೆ ನಡೆಸಿ, ಹಳೆಯ ವರ್ಷದಲ್ಲಿನ ಕಹಿ ನೆನಪುಗಳನ್ನು ಮರೆತು, ಸಿಹಿ ಗಳಿಗೆಗಳಿಗಾಗಿ ದೇವರಿಗೆ ಸ್ತುತಿ ಸ್ತೋತ್ರ ಸಲ್ಲಿಸಿದರು. ಹೊಸ ವರ್ಷ ಜಗತ್ತಿಗೆ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.