<p>ಮಂಗಳೂರು: ಎನ್ಐಟಿಕೆ ತಾಂತ್ರಿಕ ವಿಶ್ವವಿದ್ಯಾಲಯವು ಆಹಾರ ಪದಾರ್ಥಗಳನ್ನು ಶೇಖರಿಸಿ, ತಯಾರಿಸಲು ಸಿದ್ಧವಾಗಿರುವಂತಹ ತಂತ್ರಜ್ಞಾನವನ್ನು ಸಂಶೋಧಿಸಿದ್ದು, ಅದನ್ನು ಬೆಂಗಳೂರಿನ ಎನ್ಜಿವಿ ನ್ಯಾಚುರಲ್ಸ್ ಕಂಪನಿಗೆ ವರ್ಗಾವಣೆ ಮಾಡಲಾಯಿತು.</p>.<p>ತಂತ್ರಜ್ಞಾನದ ಸಂಶೋಧಕ ಡಾ.ಪ್ರಸನ್ನ ಬಿ.ಡಿ., ಅಧಿಕಾರಿಗಳಾದ ಪ್ರೊ. ಅನಂತನಾರಾಯಣ ವಿ.ಎಸ್., ಪ್ರೊ. ಶ್ರೀಪತಿ ಆಚಾರ್ಯ, ಡಾ. ಸುಬ್ರಾಯ್ ಹೆಗಡೆ ಹಾಗೂ ಎನ್ಜಿವಿ ನ್ಯಾಚುರಲ್ಸ್ನ ಸ್ಥಾಪಕ ನವೀನ್ ಹಾಜರಿದ್ದರು.</p>.<p>ಎನ್ಜಿವಿ ನ್ಯಾಚುರಲ್ಸ್ ಖಾಸಗಿ ಒಡೆತನದ ಆಹಾರ ಸಂಸ್ಕರಣಾ ಕಂಪನಿಯಾಗಿದ್ದು, ಎನ್ಐಟಿಕೆ ತಾಂತ್ರಿಕ ವಿಶ್ವವಿದ್ಯಾಲಯದ ಈ ಹೊಸ ಸಂಶೋಧನೆಯನ್ನು ಮೆಚ್ಚಿ. ಅದನ್ನು ವರ್ಗಾವಣೆ ಮಾಡಿಕೊಳ್ಳುವ ಔಪಚಾರಿಕ ಪ್ರಕ್ರಿಯೆಗಳನ್ನು ಶುಕ್ರವಾರ ಪೂರೈಸಿತು.</p>.<p>ಎನ್ಐಟಿಕೆ ತಾಂತ್ರಿಕ ವಿಶ್ವವಿದ್ಯಾಲಯದ ಕೆಮಿಕಲ್ ಎಂಜಿನಿಯರಿಂಗ್ನ ಸಹ ಪ್ರಾಧ್ಯಾಪಕ ಡಾ.ಪ್ರಸನ್ನ ಬಿ.ಡಿ. ಅವರು, ಕಾಡಲ್ಲಿ ಮತ್ತು ನಾಡಲ್ಲಿ ಸಿಗುವಂತಹ ಗೆಡ್ಡೆ-ಗೆಣಸುಗಳಲ್ಲಿನ ತುರಿಕೆಯ ಅಂಶವನ್ನು ಹೋಗಲಾಡಿಸಿ, ಅವು ಹಾಳಾಗದಂತೆ ಹಲವಾರು ತಿಂಗಳುಗಳ ಕಾಲ ಶೇಖರಿಸಿಡುವಂತಹ ತಂತ್ರಜ್ಞಾನ ಸಂಶೋಧಿಸಿದ್ದಾರೆ.</p>.<p>ಈಗಾಗಲೇ ರೈತರು ಬೆಳೆಯುವ ಹಲವಾರು ಗೆಡ್ಡೆ ಗೆಣಸುಗಳನ್ನು ಬಳಸುವುದರಿಂದ ಗಂಟಲಲ್ಲಿ ತುರಿಕೆಯ ಸಮಸ್ಯೆಗಳು ಎದುರಾಗುತ್ತದೆ. ಅದನ್ನು ಉಪಯೋಗ ಯೋಗ್ಯವಾಗಿ ಬಳಸಲು ಹಲವಾರು ವಿಧಾನಗಳಿದ್ದರೂ, ಅವು ಬಹಳ ಸಮಯ ತೆಗೆದುಕೊಳ್ಳುತ್ತವೆ. ಅಲ್ಲದೇ ಅವುಗಳನ್ನು ತುಂಬಾ ದಿನಗಳ ಕಾಲ ಶೇಖರಿಸಿಡಲು ಸಾಧ್ಯವಿಲ್ಲದಾಗಿತ್ತು. ಈ ಸಂಶೋಧನೆಯಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಡಾ.ಪ್ರಸನ್ನ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಎನ್ಐಟಿಕೆ ತಾಂತ್ರಿಕ ವಿಶ್ವವಿದ್ಯಾಲಯವು ಆಹಾರ ಪದಾರ್ಥಗಳನ್ನು ಶೇಖರಿಸಿ, ತಯಾರಿಸಲು ಸಿದ್ಧವಾಗಿರುವಂತಹ ತಂತ್ರಜ್ಞಾನವನ್ನು ಸಂಶೋಧಿಸಿದ್ದು, ಅದನ್ನು ಬೆಂಗಳೂರಿನ ಎನ್ಜಿವಿ ನ್ಯಾಚುರಲ್ಸ್ ಕಂಪನಿಗೆ ವರ್ಗಾವಣೆ ಮಾಡಲಾಯಿತು.</p>.<p>ತಂತ್ರಜ್ಞಾನದ ಸಂಶೋಧಕ ಡಾ.ಪ್ರಸನ್ನ ಬಿ.ಡಿ., ಅಧಿಕಾರಿಗಳಾದ ಪ್ರೊ. ಅನಂತನಾರಾಯಣ ವಿ.ಎಸ್., ಪ್ರೊ. ಶ್ರೀಪತಿ ಆಚಾರ್ಯ, ಡಾ. ಸುಬ್ರಾಯ್ ಹೆಗಡೆ ಹಾಗೂ ಎನ್ಜಿವಿ ನ್ಯಾಚುರಲ್ಸ್ನ ಸ್ಥಾಪಕ ನವೀನ್ ಹಾಜರಿದ್ದರು.</p>.<p>ಎನ್ಜಿವಿ ನ್ಯಾಚುರಲ್ಸ್ ಖಾಸಗಿ ಒಡೆತನದ ಆಹಾರ ಸಂಸ್ಕರಣಾ ಕಂಪನಿಯಾಗಿದ್ದು, ಎನ್ಐಟಿಕೆ ತಾಂತ್ರಿಕ ವಿಶ್ವವಿದ್ಯಾಲಯದ ಈ ಹೊಸ ಸಂಶೋಧನೆಯನ್ನು ಮೆಚ್ಚಿ. ಅದನ್ನು ವರ್ಗಾವಣೆ ಮಾಡಿಕೊಳ್ಳುವ ಔಪಚಾರಿಕ ಪ್ರಕ್ರಿಯೆಗಳನ್ನು ಶುಕ್ರವಾರ ಪೂರೈಸಿತು.</p>.<p>ಎನ್ಐಟಿಕೆ ತಾಂತ್ರಿಕ ವಿಶ್ವವಿದ್ಯಾಲಯದ ಕೆಮಿಕಲ್ ಎಂಜಿನಿಯರಿಂಗ್ನ ಸಹ ಪ್ರಾಧ್ಯಾಪಕ ಡಾ.ಪ್ರಸನ್ನ ಬಿ.ಡಿ. ಅವರು, ಕಾಡಲ್ಲಿ ಮತ್ತು ನಾಡಲ್ಲಿ ಸಿಗುವಂತಹ ಗೆಡ್ಡೆ-ಗೆಣಸುಗಳಲ್ಲಿನ ತುರಿಕೆಯ ಅಂಶವನ್ನು ಹೋಗಲಾಡಿಸಿ, ಅವು ಹಾಳಾಗದಂತೆ ಹಲವಾರು ತಿಂಗಳುಗಳ ಕಾಲ ಶೇಖರಿಸಿಡುವಂತಹ ತಂತ್ರಜ್ಞಾನ ಸಂಶೋಧಿಸಿದ್ದಾರೆ.</p>.<p>ಈಗಾಗಲೇ ರೈತರು ಬೆಳೆಯುವ ಹಲವಾರು ಗೆಡ್ಡೆ ಗೆಣಸುಗಳನ್ನು ಬಳಸುವುದರಿಂದ ಗಂಟಲಲ್ಲಿ ತುರಿಕೆಯ ಸಮಸ್ಯೆಗಳು ಎದುರಾಗುತ್ತದೆ. ಅದನ್ನು ಉಪಯೋಗ ಯೋಗ್ಯವಾಗಿ ಬಳಸಲು ಹಲವಾರು ವಿಧಾನಗಳಿದ್ದರೂ, ಅವು ಬಹಳ ಸಮಯ ತೆಗೆದುಕೊಳ್ಳುತ್ತವೆ. ಅಲ್ಲದೇ ಅವುಗಳನ್ನು ತುಂಬಾ ದಿನಗಳ ಕಾಲ ಶೇಖರಿಸಿಡಲು ಸಾಧ್ಯವಿಲ್ಲದಾಗಿತ್ತು. ಈ ಸಂಶೋಧನೆಯಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಡಾ.ಪ್ರಸನ್ನ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>