ದೇಶವನ್ನು ಆಳಿದ, ಲೂಟಿ ಮಾಡಿದವರ ಹೆಸರುಗಳನ್ನು ಇಡುವಾಗ ವ್ಯಕ್ತವಾಗದ ಆಕ್ಷೇಪ, ದೇಶಭಕ್ತರ ಹೆಸರನ್ನು ಇಡುವಾಗಿ ಏಕೆ ಆರಂಭವಾಗುತ್ತದೆ? ಯು.ಎಸ್. ಮಲ್ಯ, ಜಾರ್ಜ್ ಫರ್ನಾಂಡಿಸ್, ರಾಣಿ ಅಬ್ಬಕ್ಕ ಅವರ ಹೆಸರನ್ನು ಕೆಲ ವೃತ್ತಗಳಿಗೆ ಇಡಲಾಗಿದೆ. ಆದರೆ, ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ರಸ್ತೆಗೆ ಇಡುವಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಅಡ್ಡಿಪಡಿಸಿದರು ಎಂದು ತಿರುಗೇಟು ನೀಡಿದರು.