ಗೋಷ್ಠಿಗಳು: ಖುಷಿ-ಕೃಷಿ-ಪರಪೋಕುದ ಸಂಸ್ಕೃತಿ ಗೋಷ್ಠಿ ನಡೆಯಿತು. ಡಾ.ಗಣನಾಥ ಶೆಟ್ಟಿ ಎಕ್ಕಾರ್ ಅವರು ಋಷಿ ಸಂಸ್ಕೃತಿ, ಡಾ. ಪ್ರಭಾಕರ ಶಿಶಿಲ ಅವರು ಕೃಷಿ ಸಂಸ್ಕೃತಿ, ಪ್ರೊ. ಡಿ ಯದುಪತಿ ಗೌಡ ಅವರು ಪರಪೋಕುದ ಸಂಸ್ಕೃತಿ ಬಗ್ಗೆ ಗೋಷ್ಠಿಗಳನ್ನು ನಡೆಸಿಕೊಟ್ಟರು. ಕವಿ-ಕಾವ್ಯೊ-ಪದೋ-ಚಿತ್ರೊ-ನಲಿಕೆ ನಡೆಯಿತು. ಮಲರ್ ಜಯರಾಮ ರೈ, ವಿಶ್ವನಾಥ ಕುಲಾಲ್, ಹರೀಶ್ ಶೆಟ್ಟಿ ಸೂಡ, ಪೂವಪ್ಪ ನೇರಳಕಟ್ಟೆ, ರಾಜಶ್ರೀ ಟಿ. ರೈ ಪೆರ್ಲ, ಆಶಾ ದಿಲೀಪ್ ಸುಳ್ಯಮೆ, ಗಣೇಶ್ ಸೋಮಯಾಜಿ, ಶರತ್ ಹೊಳ್ಳ, ರವಿರಾಜ ಶೆಟ್ಟಿ ಒಡಿಯೂರು ಭಾಗವಹಿಸಿದ್ದರು.