ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪರಿಚಿತವಾದ ಉಜಿರೆಯು ಸುರ್ಯ ಸದಾಶಿವ ರುದ್ರ ದೇವಸ್ಥಾನ, ಮುಂಡಾಜೆ, ಬೆಳಾಲು, ಸೌತಡ್ಕ, ಕನ್ಯಾಡಿ ರಾಮಕ್ಷೇತ್ರ ಮೊದಲಾದ ಪ್ರವಾಸಿ ತಾಣಗಳಿಗೂ ಸಂಪರ್ಕ ಕಲ್ಪಿಸುವ ಕೇಂದ್ರ. ಚರಂಡಿ ಇಲ್ಲದ ರಸ್ತೆಗಳು, ರಸ್ತೆ ಬದಿಯಲ್ಲಿ ಅನಧಿಕೃತ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳು, ಅನಧಿಕೃತ ವಾಣಿಜ್ಯ ಸಂಕೀರ್ಣ, ವಾಹನಗಳ ಪಾರ್ಕಿಂಗ್ ಸಮಸ್ಯೆ ಇಲ್ಲಿ ಕಿರಿಕಿರಿ ಸೃಷ್ಟಿಸುತ್ತಿದೆ.