ಕಡಬ ಸಬ್ ಇನ್ಸ್ಪೆಕ್ಟರ್ ರುಕ್ಮ ನಾಯ್ಕ್ ನೇತೃತ್ವದ ಪೊಲೀಸ್ ತಂಡವು ದಾಳಿ ನಡೆಸಿದ್ದು, ಮನೆಯಲ್ಲಿದ್ದ 2 ನಕಲಿ ಪಿಸ್ತೂಲ್ ಮತ್ತು 2 ಖಾಲಿ ತೋಟೆ, ರಂಜಕ, ಪೊಟ್ಯಾಶಿಯಂ, ಕೇಪು ಮೊದಲಾದ ಸ್ಪೋಟಕ ವಸ್ತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎ.ಎಸ್.ಐ. ಚಿದಾನಂದ ರೈ, ಸಿಬ್ಬಂದಿ ಸ್ಕರಿಯ, ಭವಿತ್ ರೈ, ಶ್ರೀಶೈಲ, ಮಹೇಶ್, ಜೀಪು ಚಾಲಕ ಕನಕರಾಜ್ ಇದ್ದರು.