ಮಂಗಳೂರಿನ ರೂಟ್ ನಂಬರ್ 27ರ ಗಣೇಶ್ ಪ್ರಸಾದ್ ಬಸ್ ಮೇಲೆ ಡ್ರಗ್ಸ್ ವಿರುದ್ಧದ ಜಾಗೃತಿಯನ್ನು ಚಿತ್ರಿಸಲಾಗಿದೆ. ‘Life is in your hand', ‘Drug will doom', 'say no to drug' ಎಂಬಿತ್ಯಾದಿ ಘೋಷವಾಕ್ಯಗಳನ್ನು ಬರೆದು, ಚಿತ್ರಿಸಲಾಗಿದೆ. ಈ ಬಸ್ ಸ್ಟೇಟ್ ಬ್ಯಾಂಕ್ ಹಾಗೂ ಅತ್ತಾವರ ಮಾರ್ಗವಾಗಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂದೇಶ ನೀಡುವುದು ಉದ್ದೇಶವಾಗಿದೆ.