ಸಿಡಿಲ ಆಘಾತಕ್ಕೆ ಕರು ಸಾವು: ಕರಿಂದಳಂ ಕೋಯಿತ್ತವರ ಕಾಲೊನಿ ನಿವಾಸಿ ಎಂ.ರಮೇಶನ್ ಎಂಬುವರ ಹಟ್ಟಿಯಲ್ಲಿದ್ದ ಕರು ಸಿಡಿಲ ಆಘಾತಕ್ಕೆ ಮೃತಪಟ್ಟಿದೆ. ಅವರ ಹಿತ್ತಿಲ ತೆಂಗಿನ ಮರ ಮತ್ತು ನುಗ್ಗೆ ಮರವೂ ಸುಟ್ಟು ಕರಕಲಾಗಿದೆ. ಚಾಯೋತ್ ಪೆನ್ಶಮ್ಮೂಕ್ ಎಂಬಲ್ಲಿನ ಷೀನಾ ರಾಘವನ್ ಅವರ ಮನೆಯ ವಿದ್ಯುತ್ಉಪಕರಣಗಳು ಸುಟ್ಟುಹೋಗಿವೆ. ವಿವಿಧೆಡೆ ಗೂಡಂಗಡಿಗಳ ಸೂರು ಬಿರುಸಿನ ಗಾಳಿಗೆ ಹಾರಿಹೋಗಿದೆ.