ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾರಾಂತ್ಯ ಕರ್ಫ್ಯೂ ವೇಳೆ ಕೆಲವು ಅಂಗಡಿಗಳಿಗೆ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಬಟ್ಟೆ ಅಂಗಡಿ, ಪಾದರಕ್ಷೆ ಮೊದಲಾದ ವ್ಯಾಪಾರಕ್ಕೆ ಅವಕಾಶ ಇಲ್ಲ. ವಾರಾಂತ್ಯ ಕರ್ಫ್ಯೂ ವಿಧಿಸುವುದರ ಹಿಂದಿನ ತರ್ಕ ಯಾವುದೆಂದು ತಿಳಿಯುತ್ತಿಲ್ಲ. ಇದರಿಂದ ಕೋವಿಡ್ ತಡೆಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ವಾರಾಂತ್ಯ ಕರ್ಫ್ಯೂ ಇರುವ ಕಾರಣಕ್ಕೆ ಜನರು ಶನಿವಾರ, ಭಾನುವಾರ ಹೊರತುಪಡಿಸಿ, ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ’ ಎಂದರು.