ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ‘ರುದ್ರ ಥೇಟರ್‘ನ ರಂಗ ನಿರ್ದೇಶಕ ವಿದ್ದು ಉಚ್ಚಿಲ್, ‘ದ್ವೇಷರಹಿತ ಸಮಾಜ ನಿರ್ಮಿಸಲು ಗುರು ಸಂದೇಶ ಸಾರುವ ಉದ್ದೇಶದಿಂದ ರೆಪರ್ಟರಿ ಮಾದರಿಯ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. 21 ಮಂದಿ ನುರಿತ ರಂಗಕರ್ಮಿಗಳ ತಂಡ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಪ್ರದೇಶದಲ್ಲಿ ನಾಟಕ ಪ್ರದರ್ಶಿಸಲಿದೆ. ಎರಡು ಗಂಟೆಯ ಈ ಪ್ರಯೋಗವನ್ನು ಕ್ರಮೇಣ ಇತರ ಪ್ರದೇಶಗಳಿಗೂ ವಿಸ್ತರಿಸಲಿದ್ದೇವೆ. ಎರಡು ತಿಂಗಳ ಕಾಲ ನಮ್ಮ ತಂಡ ಸಂಚಾರ ನಡೆಸಲಿದೆ’ ಎಂದರು.