ಈ ಘಟನೆ ಬಗ್ಗೆ ಬೇಬಿ ಅವರು ಕೂಡ ದೂರು ನೀಡಿದ್ದು, ‘ಕಾರ್ಕಳ ಸಾಣೂರು ಶೈಲಜಾ ಶೆಟ್ಟಿ , ಮುಡಿಪು ರವೀಂದ್ರ ಶೆಟ್ಟಿ, ಗಣೇಶ್ ಕುಂಟಲಪಾಡಿ, ಕೃಷ್ಣ ಸರಪಾಡಿ , ಯೋಗಿಶ್ ಶೆಟ್ಟಿ ಸಾಣೂರು ಎಂಬವರು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬಗ್ಗೆ ತಕರಾರು ತೆಗೆದು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಸಂಘದ ಸದಸ್ಯರಿಗೂ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಿಂದ ಗಾಯಗೊಂಡ ನಾನು ಬಿ.ಸಿ.ರೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆದಾಖಲಾಗಿದ್ದೆ ಎಂದು ಆರೋಪಿಸಿದ್ದಾರೆ’ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.