ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸಮೀಪದ ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಳಚ್ಚಿಲ್ ನೇತ್ರಾವತಿ ನದಿಯಿಂದ ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ₹ 10 ಲಕ್ಷ ಮೌಲ್ಯದ ಎರಡು ಟಿಪ್ಪರ್ಗಳನ್ನು ನಗರ ಠಾಣೆ ಪೊಲೀಸರು ಸೋಮವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಲಾರಿ ಚಾಲಕ ಸರ್ಫರಾಜ್ ಅಹ್ಮದ್, ಕಿರಣ್, ಮುಹಮ್ಮದ್ ಇಸ್ಮಾಯಿಲ್ ಮತ್ತು ಲಾರಿ ಮಾಲೀಕ ಅಬ್ದುಲ್ ಅಜೀಝ್, ಅವಿಲ್ ಕ್ರಾಸ್ತ, ಮುಹಮ್ಮದ್ ಆರಿಫ್ ಅವರಿಗೆ ಮರಳು ಪೂರೈಸಿದ ವಲಚ್ಚಿಲ್ ಸತ್ತಾರ್ ಮತ್ತು ಅಜರುದ್ದೀನ್ ಎಂಬುಬರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಎಸ್ಐ ರಾಮಕೃಷ್ಣ ತಿಳಿಸಿದ್ದಾರೆ.