<p><strong>ಮಂಗಳೂರು</strong>: ಈಜುಕೊಳದಲ್ಲಿ ರಾಜ್ಯಕ್ಕಾಗಿ ಪದಕಗಳನ್ನು ಗೆದ್ದುಕೊಟ್ಟಿರುವ ಮಂಗಳೂರಿನ ಸಾತ್ವಿಕ್ ನಾಯಕ್ ಸುಜೀರ್ ಅವರು ಓಪನ್ ವಾಟರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನಲ್ಲಿ ಮೊದಲ ಚಿನ್ನ ಗೆದ್ದು ಸಂಭ್ರಮಿಸಿದರು. </p>.<p>ಭಾರತ ಈಜು ಫೆಡರೇಷನ್ ಆಶ್ರಯದಲ್ಲಿ ಕರ್ನಾಟಕ ಈಜು ಸಂಸ್ಥೆ ನಗರದ ತಣ್ಣೀರುಬಾವಿ ಬೀಚ್ನಲ್ಲಿ ಆಯೋಜಿಸಿದ್ದ ಚಾಂಪಿಯನ್ಷಿಪ್ನ ಪುರುಷರ 7.5 ಕಿಲೊಮೀಟರ್ ಗುಂಪು 2ರಲ್ಲಿ ಕರ್ನಾಟಕದವರೇ ಆದ ಕಿಶನ್ ಎಸ್.ವಿ ಅವರ ತೀವ್ರ ಸವಾಲನ್ನು ಮೀರಿ ಸಾತ್ವಿಕ್ ಮೊದಲಿಗರಾದರು. ಸುಜೀರ್ 1 ತಾಸು 51:6ನಿಮಿಷಗಳಲ್ಲಿ ಗುರಿ ತಲುಪಿದರೆ ಕಿಶನ್ 8 ಸೆಕೆಂಡು ತಡವಾಗಿ ಗುರಿಸೇರಿದರು.</p>.<p>ಪುರುಷರ 5ಕಿಮೀ ಮುಕ್ತ ವಿಭಾಗದ ಮೂರೂ ಪದಕಗಳು ಕರ್ನಾಟಕದ ಪಾಲಾದವು. ಪವನ್ ಧನಂಜಯ ಚಿನ್ನ ಗೆದ್ದರೆ ರೇಣುಕಾಚಾರ್ಯ ಮತ್ತು ಧ್ಯಾನ್ ಬಾಲಕೃಷ್ಣನ್ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಗಳಿಸಿದರು. ಬಾಲಕಿಯರ 3 ಕಿಮೀ ಗುಂಪು 4ರಲ್ಲೂ ಚಿನ್ನ ಮತ್ತು ಬೆಳ್ಳಿ ಕರ್ನಾಟಕದ ಪಾಲಾಯಿತು. ಬೆಂಗಳೂರಿನ ಇಡಿಕಾ ಭಟ್ ಚಿನ್ನ ಗಳಿಸಿದರೆ ಮಂಗಳೂರಿನ ದೇವಿಕಾ ಎಂ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಬಾಲಕರ 3 ಕಿಮೀ ಗುಂಪು 4ರಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಕರ್ನಾಟಕ ಗೆದ್ದುಕೊಂಡಿತು. ಬಾಲಕಿಯರ 5 ಕಿಮೀ ಮುಕ್ತ ವಿಭಾಗದ ಕಂಚಿನ ಪದಕವೂ ಕರ್ನಾಟಕಕ್ಕೆ ಲಭಿಸಿತು. </p>.<p>ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ ವಿಒನ್ ಈಜುಕೇಂದ್ರದ ಲೋಕರಾಜ್ ಬಳಿ ತರಬೇತಿ ಪಡೆಯುತ್ತಿದ್ದು ರಾಷ್ಟ್ರೀಯ ಓಪನ್ ವಾಟರ್ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಸ್ಪರ್ಧಿಸಿರುವುದಾಗಿ ಅವರ ತಂದೆ ಡಾ.ನಾಗೇಂದ್ರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p class="Subhead">ಶನಿವಾರದ ಫಲಿತಾಂಶಗಳು: 7.5ಕಿಮೀ ಪುರುಷರ ಗುಂಪು2: ಸಾತ್ವಿಕ್ ನಾಯಕ್ ಸುಜೀರ್ (ಕರ್ನಾಟಕ)–1. ಕಾಲ: 1ಗಂಟೆ 51:6ನಿಮಿಷ, ಕಿಶನ್ ಎಸ್.ವಿ (ಕರ್ನಾಟಕ)–2, ಸಿ.ಶರಣ್ (ತಮಿಳುನಾಡು)–3; 5 ಕಿಮೀ: ಪುರುಷರ ಮುಕ್ತ ವಿಭಾಗ: ಪವನ್ ಧನಂಜಯ (ಕರ್ನಾಟಕ)–1. ಕಾಲ: 1:3:22, ರೇಣುಕಾಚಾರ್ಯ ಎಚ್ (ಕರ್ನಾಟಕ)–2, ಧ್ಯಾನ್ ಬಾಲಕೃಷ್ಣ (ಕರ್ನಾಟಕ)–3; ಮಹಿಳೆಯರು: ಆಸ್ತಾ ಚೌಧರಿ (ಅಸ್ಸಾಂ)–1. ಕಾಲ: 1:13:46, ಜಾಹ್ನವಿ ಕಶ್ಯಪ್ (ಅಸ್ಸಾಂ)–2, ಜನ್ಯಾ ಬಿ.ಎಸ್ (ಕರ್ನಾಟಕ)–3; 3 ಕಿಮೀ: ಬಾಲಕರ ಗುಂಪು 4: ಮೋನಿಶ್ ಪಿ (ತಮಿಳುನಾಡು)–1. ಕಾಲ: 27:36ನಿ, ರೋನಿತ್ ಅರುಣ್ ಕುಮಾರ್ (ಕರ್ನಾಟಕ)–2, ಆದಿಲ್ (ಕರ್ನಾಟಕ–3; ಬಾಲಕಿಯರ ಗುಂಪು 4: ಇಡಿಕಾ ಭಟ್ (ಕರ್ನಾಟಕ)–1. ಕಾಲ: 32:31ನಿ, ದೇವಿಕಾ ಎಂ (ಕರ್ನಾಟಕ)–2, ರೇವಾ ನಿಖಿಲ್ (ತಮಿಳುನಾಡು)–3. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಈಜುಕೊಳದಲ್ಲಿ ರಾಜ್ಯಕ್ಕಾಗಿ ಪದಕಗಳನ್ನು ಗೆದ್ದುಕೊಟ್ಟಿರುವ ಮಂಗಳೂರಿನ ಸಾತ್ವಿಕ್ ನಾಯಕ್ ಸುಜೀರ್ ಅವರು ಓಪನ್ ವಾಟರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನಲ್ಲಿ ಮೊದಲ ಚಿನ್ನ ಗೆದ್ದು ಸಂಭ್ರಮಿಸಿದರು. </p>.<p>ಭಾರತ ಈಜು ಫೆಡರೇಷನ್ ಆಶ್ರಯದಲ್ಲಿ ಕರ್ನಾಟಕ ಈಜು ಸಂಸ್ಥೆ ನಗರದ ತಣ್ಣೀರುಬಾವಿ ಬೀಚ್ನಲ್ಲಿ ಆಯೋಜಿಸಿದ್ದ ಚಾಂಪಿಯನ್ಷಿಪ್ನ ಪುರುಷರ 7.5 ಕಿಲೊಮೀಟರ್ ಗುಂಪು 2ರಲ್ಲಿ ಕರ್ನಾಟಕದವರೇ ಆದ ಕಿಶನ್ ಎಸ್.ವಿ ಅವರ ತೀವ್ರ ಸವಾಲನ್ನು ಮೀರಿ ಸಾತ್ವಿಕ್ ಮೊದಲಿಗರಾದರು. ಸುಜೀರ್ 1 ತಾಸು 51:6ನಿಮಿಷಗಳಲ್ಲಿ ಗುರಿ ತಲುಪಿದರೆ ಕಿಶನ್ 8 ಸೆಕೆಂಡು ತಡವಾಗಿ ಗುರಿಸೇರಿದರು.</p>.<p>ಪುರುಷರ 5ಕಿಮೀ ಮುಕ್ತ ವಿಭಾಗದ ಮೂರೂ ಪದಕಗಳು ಕರ್ನಾಟಕದ ಪಾಲಾದವು. ಪವನ್ ಧನಂಜಯ ಚಿನ್ನ ಗೆದ್ದರೆ ರೇಣುಕಾಚಾರ್ಯ ಮತ್ತು ಧ್ಯಾನ್ ಬಾಲಕೃಷ್ಣನ್ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಗಳಿಸಿದರು. ಬಾಲಕಿಯರ 3 ಕಿಮೀ ಗುಂಪು 4ರಲ್ಲೂ ಚಿನ್ನ ಮತ್ತು ಬೆಳ್ಳಿ ಕರ್ನಾಟಕದ ಪಾಲಾಯಿತು. ಬೆಂಗಳೂರಿನ ಇಡಿಕಾ ಭಟ್ ಚಿನ್ನ ಗಳಿಸಿದರೆ ಮಂಗಳೂರಿನ ದೇವಿಕಾ ಎಂ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಬಾಲಕರ 3 ಕಿಮೀ ಗುಂಪು 4ರಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಕರ್ನಾಟಕ ಗೆದ್ದುಕೊಂಡಿತು. ಬಾಲಕಿಯರ 5 ಕಿಮೀ ಮುಕ್ತ ವಿಭಾಗದ ಕಂಚಿನ ಪದಕವೂ ಕರ್ನಾಟಕಕ್ಕೆ ಲಭಿಸಿತು. </p>.<p>ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ ವಿಒನ್ ಈಜುಕೇಂದ್ರದ ಲೋಕರಾಜ್ ಬಳಿ ತರಬೇತಿ ಪಡೆಯುತ್ತಿದ್ದು ರಾಷ್ಟ್ರೀಯ ಓಪನ್ ವಾಟರ್ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಸ್ಪರ್ಧಿಸಿರುವುದಾಗಿ ಅವರ ತಂದೆ ಡಾ.ನಾಗೇಂದ್ರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p class="Subhead">ಶನಿವಾರದ ಫಲಿತಾಂಶಗಳು: 7.5ಕಿಮೀ ಪುರುಷರ ಗುಂಪು2: ಸಾತ್ವಿಕ್ ನಾಯಕ್ ಸುಜೀರ್ (ಕರ್ನಾಟಕ)–1. ಕಾಲ: 1ಗಂಟೆ 51:6ನಿಮಿಷ, ಕಿಶನ್ ಎಸ್.ವಿ (ಕರ್ನಾಟಕ)–2, ಸಿ.ಶರಣ್ (ತಮಿಳುನಾಡು)–3; 5 ಕಿಮೀ: ಪುರುಷರ ಮುಕ್ತ ವಿಭಾಗ: ಪವನ್ ಧನಂಜಯ (ಕರ್ನಾಟಕ)–1. ಕಾಲ: 1:3:22, ರೇಣುಕಾಚಾರ್ಯ ಎಚ್ (ಕರ್ನಾಟಕ)–2, ಧ್ಯಾನ್ ಬಾಲಕೃಷ್ಣ (ಕರ್ನಾಟಕ)–3; ಮಹಿಳೆಯರು: ಆಸ್ತಾ ಚೌಧರಿ (ಅಸ್ಸಾಂ)–1. ಕಾಲ: 1:13:46, ಜಾಹ್ನವಿ ಕಶ್ಯಪ್ (ಅಸ್ಸಾಂ)–2, ಜನ್ಯಾ ಬಿ.ಎಸ್ (ಕರ್ನಾಟಕ)–3; 3 ಕಿಮೀ: ಬಾಲಕರ ಗುಂಪು 4: ಮೋನಿಶ್ ಪಿ (ತಮಿಳುನಾಡು)–1. ಕಾಲ: 27:36ನಿ, ರೋನಿತ್ ಅರುಣ್ ಕುಮಾರ್ (ಕರ್ನಾಟಕ)–2, ಆದಿಲ್ (ಕರ್ನಾಟಕ–3; ಬಾಲಕಿಯರ ಗುಂಪು 4: ಇಡಿಕಾ ಭಟ್ (ಕರ್ನಾಟಕ)–1. ಕಾಲ: 32:31ನಿ, ದೇವಿಕಾ ಎಂ (ಕರ್ನಾಟಕ)–2, ರೇವಾ ನಿಖಿಲ್ (ತಮಿಳುನಾಡು)–3. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>