ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ‘ವಂದೇ ಭಾರತ್ ಮಿಷನ್’ನಲ್ಲಿ ಕುವೈತ್ನಿಂದ ಮಂಗಳೂರಿಗೆ ಬೇಡಿಕೆಯಷ್ಟು ವಿಮಾನ ಒದಗಿಸಿಲ್ಲ. ವಿವಿಧ ಸಂಘ, ಸಂಸ್ಥೆಗಳ ನೇತೃತ್ವದಲ್ಲಿ ಬಾಡಿಗೆ ವಿಮಾನಗಳನ್ನು ಹಿಡಿದು ಜನರು ಬರುತ್ತಿದ್ದಾರೆ. ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಷನ್ನ ಕರ್ನಾಟಕ ಘಟಕ ಜೂನ್ 27ರಂದು ವಿಮಾನದ ವ್ಯವಸ್ಥೆ ಮಾಡಿತ್ತು. ಆದರೆ, ಮಂಗಳೂರಿನಲ್ಲಿ ವಿಮಾನ ಇಳಿಸಲು ರಾಜ್ಯ ಸರ್ಕಾರ ಅನುಮತಿ ನೀಡದ ಕಾರಣದಿಂದ ಹಾರಾಟ ರದ್ದಾಗಿದೆ.