ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಿಂದ ವರ್ಗಾವಣೆ ಆಗಿರುವ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಶನಿವಾರ ಇಲ್ಲಿನ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ನಿವಾಸದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ಜ್ಯೋತಿರ್ಲಿಂಗ ಹೊನಕಟ್ಟಿ, ಸಿದ್ಧಗೌಡ ಭಜಂತ್ರಿ, ಅಶೋಕ್ ಪಿ., ಲೋಕೇಶ್ ಎ.ಸಿ., ಗುರುದತ್ ಕಾಮತ್, ರೇವತಿ ಎನ್. ಅವರನ್ನು ಬೀಳ್ಕೊಡಲಾಯಿತು. ರಾಜ್ಯ ಗುಪ್ತವಾರ್ತೆಯಲ್ಲಿದ್ದ ಮಂಜುನಾಥ ಪಾಂಡೇಶ್ವರ ಠಾಣೆಗೆ ವರ್ಗಾವಣೆ ಆಗಿದ್ದು, ಅವರನ್ನು ಸ್ವಾಗತಿಸಲಾಯಿತು.