‘ನಮ್ಮ ಫೋರಂ ನೇತೃತ್ವದಲ್ಲಿ ಹಂಪನಕಟ್ಟಾ ಸುತ್ತಲಿನ ಸುಮಾರು 300ರಷ್ಟು ಮಳಿಗೆಗಳು ಈದ್ ತನಕ ತೆರೆಯದಿರಲು ನಿರ್ಧರಿಸಿವೆ. ಕೇವಲ ಮುಸ್ಲಿಂ ವ್ಯಾಪಾರಸ್ಥರು ಮಾತ್ರವಲ್ಲ ಇತರ ಧರ್ಮೀಯರೂ ಬೆಂಬಲ ನೀಡಿದ್ದು, ಮುಂದಿನ ನಿರ್ಣಯ ತನಕ ಮಳಿಗೆ ತೆರೆಯುವುದಿಲ್ಲ ಎಂದು ತಿಳಿಸಿದ್ದಾರೆ’ ಎಂದು ಮುಸ್ಲಿಂ ವ್ಯಾಪಾರಿಗಳ ಸಂಘಟನೆಯಾದ ಕೆಟಿಎ ಯೂತ್ ಫೋರಂ ಅಧ್ಯಕ್ಷ ಮೌಶಿರ್ ಅಹ್ಮದ್ ಸಾಮಣಿಗೆ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಪೈಕಿ ಹೆಚ್ಚಿನ ಮಳಿಗೆಗಳು ಹಂಪನಕಟ್ಟಾದ ಕುನೀಲ್, ಟೋಕಿಯೊ, ಅಕ್ಬರ್ ಕಾಂಪ್ಲೆಕ್ಸ್ಗಳಲ್ಲಿವೆ.