‘ಸಹಕಾರಿ ಕ್ಷೇತ್ರದ ಬ್ಯಾಂಕೊಂದು ತಮ್ಮ ಪ್ರತಿನಿಧಿಗಳನ್ನು ಅಧ್ಯಯನಕ್ಕಾಗಿ ಇಸ್ರೇಲ್ಗೆ ಕಳುಹಿಸುತ್ತಿರುವುದು ರಾಜ್ಯದಲ್ಲೇ ಪ್ರಥಮ’ ಎಂದು ಪ್ರತಿಪಾದಿಸಿದ ಅವರು, ತಂಡವು ಇಸ್ರೇಲ್ನ ಜೆರುಸಲೇಮ್ ಹಾಗೂ ಅಲ್ಲಿನ ಸಂಸತ್ತಿಗೂ ಭೇಟಿ ನೀಡಲಿದೆ. ಬೆತ್ಲಹೇಮ್ನಲ್ಲಿ ಕುರಿ ಸಾಕಾಣಿಕೆ ಮತ್ತು ಹಾಲಿನ ಉತ್ಪಾದನೆ ಕುರಿತು ಅಧ್ಯಯನ, ಸಾವಯವ ಹಾಗೂ ಪರ್ಯಾಯ ಕೃಷಿ ಉತ್ಪನ್ನಗಳ ಅಧ್ಯಯನ, ಎಸ್.ಸಿ.ಆರ್. ಕಂಪೆನಿಯಲ್ಲಿ ಸ್ಮಾರ್ಟ್ ಡೇರಿ ಫಾರ್ಮ್ ಕುರಿತು ಅಧ್ಯಯನ, ನೆಟಾಫಿಮ್ ನೀರಾವರಿ ಕಂಪೆನಿಗೆ ಭೇಟಿ, ಹನಿ ನೀರಾವರಿ ಕುರಿತು ಅಧ್ಯಯನ ನಡೆಸಲಿದ್ದಾರೆ ಎಂದು ವಿವರಿಸಿದರು.