ಶೋಭಾಯಾತ್ರೆಗೆ ಆಕರ್ಷಕ ಕುಣಿತ ಭಜನೆ, ಹಲವು ಸ್ತಬ್ದಚಿತ್ರಗಳು ಮೆರುಗು ನೀಡಿದವು. ಚಾರ್ವಕ ಕಪಿಲೇಶ್ವರ ಸಿಂಗಾರಿ ಮೇಳದ ಚೆಂಡೆ ಮೇಳ, ಬಂಟ್ವಾಳ ಚಿಲಿಪಿಲಿ ಗೊಂಬೆ ಬಳಗದಆಕರ್ಷಕ ಗೊಂಬೆಗಳು ಮತ್ತು ಕೀಲು ಕುದುರೆ, ಬ್ಯಾಂಡ್ ವಾದ್ಯ, ಯಕ್ಷಗಾನ ವೇಷಭೂಷಣ ಗಮನ ಸೆಳೆಯಿತು. ಕುಕ್ಕೆಶ್ರೀ ಅಟೋ ಚಾಲಕ ಮಾಲೀಕರ ಸಂಘದಿಂದ ಪಾನಕ ವ್ಯವಸ್ಥೆ, ಸಮಿತಿಯ ವತಿಯಿಂದ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.