<p><strong>ಸುಳ್ಯ:</strong> ಪಟ್ಟಣ ಸೇರಿದಂತೆ ಸಂಪಾಜೆ, ಅರಂತೋಡು, ಪೆರಾಜೆ, ಜಾಲ್ಸೂರು ಪಂಚಾಯತಿ ಪ್ರದೇಶಗಳು, ಕೇರಳದ ಕಾಸರಗೋಡು ಜಿಲ್ಲೆಯ ಜನರಿಗೆ ನೀರುಣಿಸುವ ಜಲಮೂಲ ಪಯಸ್ವಿನಿ. ಆದರೆ ಜೀವನದಿ ಹಲವು ಕಾರಣಗಳಿಂದ ಮಲೀನ ಆಗುತ್ತಿದೆ.</p>.<p>ಈ ಮಧ್ಯೆ ‘ಪಯಸ್ವಿನಿ ಉತ್ಸವ ಸಮಿತಿ’ ರಚನೆಯಾಗಿದ್ದು, ಜಲಸಂರಕ್ಷಣೆ, ಮಾಲಿನ್ಯ ತಡೆ ಜಾಗೃತಿ, ವಿಷಾಂಶ, ತೈಲ, ತ್ಯಾಜ್ಯ ಸ್ಪೋಟಕ ಬಳಸದಂತೆ, ಜಲಚರ ಸಂರಕ್ಷಿಸುವಂತೆ ಜನರಲ್ಲಿ ಅರಿವು ಮೂಡಿಸಲು ಯೋಜನೆ ರೂಪಿಸಿದೆ. ಜನಪ್ರತಿನಿಧಿಗಳು, ಪರಿಸರ ಚಿಂತಕರೂ ಈಗ ಕೈಂಕರ್ಯಕ್ಕೆ ಕೈಜೋಡಿಸಲು ಸಜ್ಜಾಗಿದ್ದಾರೆ.</p>.<p>ಕೊಡಿಗಿನಲ್ಲಿ ಹುಟ್ಟಿ 87 ಕಿ.ಮೀ. ಹರಿದು ಸಮುದ್ರ ಸೇರುವ ಪಯಸ್ವಿನಿ ನದಿಯ ಒಡಲು ತ್ಯಾಜ್ಯ ತುಂಬಿ, ಇದನ್ನೇ ಜೀವ ಸೆಲೆಯಾಗಿಸಿರುವ ಮನುಷ್ಯ, ಪ್ರಾಣಿ-ಪಕ್ಷಿಗಳಿಗೆ ರೋಗ ತರುವ ತಾಣವಾಗುತ್ತಿದೆ. ತುಂಬಿ ಹರಿಯುತ್ತಿದ್ದ ಪಯಸ್ವಿನಿ ಕೆಲವು ವರ್ಷಗಳಿಂದ ಬೇಸಿಗೆಗೆ ಮೊದಲೇ ಬತ್ತುತ್ತಿದೆ.</p>.<p><strong>ಮೀನಿಗಾಗಿ ವಿಷ: </strong>ನೀರಿನ ಮಟ್ಟ ಇಳಿಯುದ್ದಂತೆ ಮೀನು ಹಿಡಿಯುವ ಮಂದಿ ನೀರಲ್ಲಿ ವಿಷ ಬೆರೆಸಿ ಕಲುಷಿತ ಮಾಡುತ್ತಿದ್ದಾರೆ. ಅಡ್ಕಾರ್, ಪಂಜಿಕಲ್, ಪೆರಾಜೆ, ಸಂಪಾಜೆ ಗ್ರಾಮದ ಕಲ್ಲುಗುಂಡಿ ಪ್ರದೇಶದಲ್ಲಿ ಈ ಮೀನುಗಾರಿಕೆ ನಡೆಯುತ್ತಿದೆ. ವಿಷ ಸೇರಿಸಿದ್ದ ಪರಿಣಾಮ ಜಲಚರ ನಾಶ ಆಗುತ್ತಾ ನೀರು ಕೂಡಾ ಕಲುಷಿತಗೊಂಡು ಮಾರಕ ರೋಗಕಾರಕವಾಗುತ್ತಿದೆ.</p>.<p><strong>ತ್ಯಾಜ್ಯ, ತೈಲ:</strong> ಮನೆಗಳ ಮಲಿನ ನೀರು, ಕೆಲವು ಚಿಕ್ಕ ಕೈಗಾರಿಕೆಗಳ ರಾಸಾಯನಿಕಯುಕ್ತ ತ್ಯಾಜ್ಯ ನೀರು, ವಾಹನಗಳನ್ನು ನದಿಗೆ ಇಳಿಸಿ ತೊಳೆಯುತ್ತಿರುವುದರಿಂದ ಡೀಸಲ್, ತೈಲದ ಅಂಶ, ತ್ಯಾಜ್ಯ ನದಿಯ ನೀರನ್ನು ಮಲಿನಗೊಳಿಸುತ್ತಿದೆ. ಅಡ್ಕಾರ್, ಕಾಂತಮಂಗಲ ಭಾಗದಲ್ಲಿ ಕೋಳಿ, ಇತರ ಮಾಂಸ ತ್ಯಾಜ್ಯ ಎಸೆಯುವ ಪರಿಪಾಠ ಮುಂದುವರಿಯುತ್ತಿದೆ.</p>.<p><strong>ಕುಡಿಯುವ ನೀರು: </strong>ಪಟ್ಟಣದಲ್ಲಿ 4000ಕ್ಕೂ ಅಧಿಕ ನಲ್ಲಿ ನೀರಿನ ಸಂಪರ್ಕ ಇದೆ. ಪಯಸ್ವಿನಿ ನದಿಯಿಂದ ಕಲ್ಲಮುಟ್ಲು ಪಂಪ್ ಹೌಸ್ನಲ್ಲಿ 1.50 ಲಕ್ಷ ಗ್ಯಾಲನ್ ಸಾಮರ್ಥ್ಯದ ಎರಡು ಟ್ಯಾಂಕ್ಗಳಲ್ಲಿ ಶೇಖರಿಸಿ ಪೂರೈಸಲಾಗುತ್ತಿದೆ. ನದಿ ಕಲುಷಿತಗೊಂಡ ಪರಿಣಾಮ ಈ ನೀರೇ ಜನರ ಒಡಲು ಸೇರುತ್ತಿದೆ. ಜಾಂಡೀಸ್ (ಹಳದಿ ರೋಗ ಕಾಮಾಲೆ) ಬರುತ್ತಿದೆ. ಏಪ್ರಿಲ್, ಮೇ ತಿಂಗಳಲ್ಲಿ ಪಟ್ಟಣದಲ್ಲಿ ಜಾಂಡೀಸ್ ರೋಗ ಕಂಡುಬರುವುದು ಸಾಮಾನ್ಯ ಎಂಬಂತಾಗಿದೆ. ಪಟ್ಟಣದಲ್ಲಿ ಸರಿಯಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಶುದ್ಧೀಕರಣ ಘಟಕ ಇಲ್ಲದೆ, ನದಿ ಇನ್ನಷ್ಟು ಮಲೀನವಾಗುತ್ತಿದೆ.</p>.<p><strong>ಜಾಗೃತಿ: </strong>ಪಯಸ್ವಿನಿ ನದಿಯ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪಯಸ್ವಿನಿ ಉತ್ಸವ ಸಮಿತಿ ರಚನೆ ಆಗಿದೆ. ಈ ಸಮಿತಿ ಅಂತರ್ಜಲ ಹೆಚ್ಚಳ, ಮಾಲಿನ್ಯ ತಡೆ ಜಾಗೃತಿ, ಮೀನುಗಾರಿಕೆ ನೆಪದಲ್ಲಿ ನೀರಿಗೆ ವಿಷ ಹಾಕುವುದನ್ನು ತಡೆಯಲು ಅಧಿಕಾರಿ, ಜನಪ್ರತಿನಿಧಿಗಳಿಗೆ ಒತ್ತಡ, ವಿದ್ಯಾರ್ಥಿಗಳಲ್ಲಿ ನದಿ ರಕ್ಷಣಾ ಅರಿವು ಇತ್ಯಾದಿ ಯೋಜನೆಗಳನ್ನು ರೂಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಳ್ಯ:</strong> ಪಟ್ಟಣ ಸೇರಿದಂತೆ ಸಂಪಾಜೆ, ಅರಂತೋಡು, ಪೆರಾಜೆ, ಜಾಲ್ಸೂರು ಪಂಚಾಯತಿ ಪ್ರದೇಶಗಳು, ಕೇರಳದ ಕಾಸರಗೋಡು ಜಿಲ್ಲೆಯ ಜನರಿಗೆ ನೀರುಣಿಸುವ ಜಲಮೂಲ ಪಯಸ್ವಿನಿ. ಆದರೆ ಜೀವನದಿ ಹಲವು ಕಾರಣಗಳಿಂದ ಮಲೀನ ಆಗುತ್ತಿದೆ.</p>.<p>ಈ ಮಧ್ಯೆ ‘ಪಯಸ್ವಿನಿ ಉತ್ಸವ ಸಮಿತಿ’ ರಚನೆಯಾಗಿದ್ದು, ಜಲಸಂರಕ್ಷಣೆ, ಮಾಲಿನ್ಯ ತಡೆ ಜಾಗೃತಿ, ವಿಷಾಂಶ, ತೈಲ, ತ್ಯಾಜ್ಯ ಸ್ಪೋಟಕ ಬಳಸದಂತೆ, ಜಲಚರ ಸಂರಕ್ಷಿಸುವಂತೆ ಜನರಲ್ಲಿ ಅರಿವು ಮೂಡಿಸಲು ಯೋಜನೆ ರೂಪಿಸಿದೆ. ಜನಪ್ರತಿನಿಧಿಗಳು, ಪರಿಸರ ಚಿಂತಕರೂ ಈಗ ಕೈಂಕರ್ಯಕ್ಕೆ ಕೈಜೋಡಿಸಲು ಸಜ್ಜಾಗಿದ್ದಾರೆ.</p>.<p>ಕೊಡಿಗಿನಲ್ಲಿ ಹುಟ್ಟಿ 87 ಕಿ.ಮೀ. ಹರಿದು ಸಮುದ್ರ ಸೇರುವ ಪಯಸ್ವಿನಿ ನದಿಯ ಒಡಲು ತ್ಯಾಜ್ಯ ತುಂಬಿ, ಇದನ್ನೇ ಜೀವ ಸೆಲೆಯಾಗಿಸಿರುವ ಮನುಷ್ಯ, ಪ್ರಾಣಿ-ಪಕ್ಷಿಗಳಿಗೆ ರೋಗ ತರುವ ತಾಣವಾಗುತ್ತಿದೆ. ತುಂಬಿ ಹರಿಯುತ್ತಿದ್ದ ಪಯಸ್ವಿನಿ ಕೆಲವು ವರ್ಷಗಳಿಂದ ಬೇಸಿಗೆಗೆ ಮೊದಲೇ ಬತ್ತುತ್ತಿದೆ.</p>.<p><strong>ಮೀನಿಗಾಗಿ ವಿಷ: </strong>ನೀರಿನ ಮಟ್ಟ ಇಳಿಯುದ್ದಂತೆ ಮೀನು ಹಿಡಿಯುವ ಮಂದಿ ನೀರಲ್ಲಿ ವಿಷ ಬೆರೆಸಿ ಕಲುಷಿತ ಮಾಡುತ್ತಿದ್ದಾರೆ. ಅಡ್ಕಾರ್, ಪಂಜಿಕಲ್, ಪೆರಾಜೆ, ಸಂಪಾಜೆ ಗ್ರಾಮದ ಕಲ್ಲುಗುಂಡಿ ಪ್ರದೇಶದಲ್ಲಿ ಈ ಮೀನುಗಾರಿಕೆ ನಡೆಯುತ್ತಿದೆ. ವಿಷ ಸೇರಿಸಿದ್ದ ಪರಿಣಾಮ ಜಲಚರ ನಾಶ ಆಗುತ್ತಾ ನೀರು ಕೂಡಾ ಕಲುಷಿತಗೊಂಡು ಮಾರಕ ರೋಗಕಾರಕವಾಗುತ್ತಿದೆ.</p>.<p><strong>ತ್ಯಾಜ್ಯ, ತೈಲ:</strong> ಮನೆಗಳ ಮಲಿನ ನೀರು, ಕೆಲವು ಚಿಕ್ಕ ಕೈಗಾರಿಕೆಗಳ ರಾಸಾಯನಿಕಯುಕ್ತ ತ್ಯಾಜ್ಯ ನೀರು, ವಾಹನಗಳನ್ನು ನದಿಗೆ ಇಳಿಸಿ ತೊಳೆಯುತ್ತಿರುವುದರಿಂದ ಡೀಸಲ್, ತೈಲದ ಅಂಶ, ತ್ಯಾಜ್ಯ ನದಿಯ ನೀರನ್ನು ಮಲಿನಗೊಳಿಸುತ್ತಿದೆ. ಅಡ್ಕಾರ್, ಕಾಂತಮಂಗಲ ಭಾಗದಲ್ಲಿ ಕೋಳಿ, ಇತರ ಮಾಂಸ ತ್ಯಾಜ್ಯ ಎಸೆಯುವ ಪರಿಪಾಠ ಮುಂದುವರಿಯುತ್ತಿದೆ.</p>.<p><strong>ಕುಡಿಯುವ ನೀರು: </strong>ಪಟ್ಟಣದಲ್ಲಿ 4000ಕ್ಕೂ ಅಧಿಕ ನಲ್ಲಿ ನೀರಿನ ಸಂಪರ್ಕ ಇದೆ. ಪಯಸ್ವಿನಿ ನದಿಯಿಂದ ಕಲ್ಲಮುಟ್ಲು ಪಂಪ್ ಹೌಸ್ನಲ್ಲಿ 1.50 ಲಕ್ಷ ಗ್ಯಾಲನ್ ಸಾಮರ್ಥ್ಯದ ಎರಡು ಟ್ಯಾಂಕ್ಗಳಲ್ಲಿ ಶೇಖರಿಸಿ ಪೂರೈಸಲಾಗುತ್ತಿದೆ. ನದಿ ಕಲುಷಿತಗೊಂಡ ಪರಿಣಾಮ ಈ ನೀರೇ ಜನರ ಒಡಲು ಸೇರುತ್ತಿದೆ. ಜಾಂಡೀಸ್ (ಹಳದಿ ರೋಗ ಕಾಮಾಲೆ) ಬರುತ್ತಿದೆ. ಏಪ್ರಿಲ್, ಮೇ ತಿಂಗಳಲ್ಲಿ ಪಟ್ಟಣದಲ್ಲಿ ಜಾಂಡೀಸ್ ರೋಗ ಕಂಡುಬರುವುದು ಸಾಮಾನ್ಯ ಎಂಬಂತಾಗಿದೆ. ಪಟ್ಟಣದಲ್ಲಿ ಸರಿಯಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಶುದ್ಧೀಕರಣ ಘಟಕ ಇಲ್ಲದೆ, ನದಿ ಇನ್ನಷ್ಟು ಮಲೀನವಾಗುತ್ತಿದೆ.</p>.<p><strong>ಜಾಗೃತಿ: </strong>ಪಯಸ್ವಿನಿ ನದಿಯ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪಯಸ್ವಿನಿ ಉತ್ಸವ ಸಮಿತಿ ರಚನೆ ಆಗಿದೆ. ಈ ಸಮಿತಿ ಅಂತರ್ಜಲ ಹೆಚ್ಚಳ, ಮಾಲಿನ್ಯ ತಡೆ ಜಾಗೃತಿ, ಮೀನುಗಾರಿಕೆ ನೆಪದಲ್ಲಿ ನೀರಿಗೆ ವಿಷ ಹಾಕುವುದನ್ನು ತಡೆಯಲು ಅಧಿಕಾರಿ, ಜನಪ್ರತಿನಿಧಿಗಳಿಗೆ ಒತ್ತಡ, ವಿದ್ಯಾರ್ಥಿಗಳಲ್ಲಿ ನದಿ ರಕ್ಷಣಾ ಅರಿವು ಇತ್ಯಾದಿ ಯೋಜನೆಗಳನ್ನು ರೂಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>