ಮಂಗಳೂರು:ಸುರತ್ಕಲ್ ವೃತ್ತಕ್ಕೆ ಯಾವುದೇ ವಿವಾದಿತ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಬಾರದು. ಅದರ ಬದಲು, ಕೋಟಿ ಚೆನ್ನಯ, ಮಂಗಳೂರಿನ ನಿರ್ಮಾತೃ ಯು.ಶ್ರೀನಿವಾಸ ಮಲ್ಯ ಅಥವಾ ಕಾರ್ಮಿಕ ಹೋರಾಟಗಾರ ಎಂ.ಲೋಕಯ್ಯ ಶೆಟ್ಟಿ ಅವರಲ್ಲಿ ಒಂದು ಹೆಸರನ್ನು ಆಯ್ಕೆ ಮಾಡಿ ನಾಮಕರಣ ಮಾಡಬೇಕು ಎಂದು ಮುಸ್ಲಿಂ ಐಕ್ಯತಾ ವೇದಿಕೆ ಒತ್ತಾಯಿಸಿದೆ.