ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಸಾಹಿತಿ ಡಾ.ರಂಗಾರೆಡ್ಡಿ ಕೋಡಿರಾಂಪುರ, ‘ಡಾ.ಆರ್. ಲಕ್ಷ್ಮೀ ನಾರಾಯಣ ಅವರು ಸಮಭಾವದ ವಿಮರ್ಶಕರು. ಸಹೃದಯ ವಿನಯವಂತರು. ಅವರ ಹಳೇಗನ್ನಡ ಸಾಹಿತ್ಯ ಜ್ಞಾನ ಅಪಾರವಾಗಿದೆ. ಅವರ ಮಾತು, ಕೃತಿಗಳಲ್ಲಿ ನಾವು ಕಾವ್ಯದ ಕಂಪನ್ನು ಕಾಣಬಹುದು. ಕೇಂದ್ರ ಸಾಹಿತ್ಯ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಿವೃತ್ತಿ ಬಳಿಕವೂ ಕನ್ನಡ, ಸಾಹಿತ್ಯದಲ್ಲಿ ಸಕ್ರಿಯವಾಗಿ ಸಾಧನೆ ಮಾಡುತ್ತಿರುವ ಸಹೃದಯಿಗಳು’ ಎಂದು ಶ್ಲಾಘಿಸಿದರು.