ಕೊಂಬೆಟ್ಟು ಕಾಲೇಜಿನಲ್ಲಿ ಮೊದಲ ಬಾರಿ ಹಲ್ಲೆ ನಡೆದಾಗ, ಪ್ರಾಂಶುಪಾಲದ ಜತೆ ಮಾತುಕತೆ ನಡೆಸಿದ್ದೆವು. ಈ ವೇಳೆ ಅವರು ಹಲ್ಲೆ ನಡೆಸಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದರು. ಆದರೆ ಸಂಘ ಪರಿವಾರವು ಗೂಂಡಾಗಿರಿ ನಡೆಸಿದ್ದೇವೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಎಬಿವಿಪಿ ಮೂಲಕ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಗೆ ಹೊರಗಿನ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಮತ್ತೆ ಮೂವರ ಮೇಲೆ ತ್ರಿಶೂಲದಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು. ಸಿಎಫ್ಐ ಪ್ರಮುಖರಾದ ಸವಾದ್ ಕಲ್ಪರ್ಪ, ರಿಯಾಝ್ ಅಂಕತಡ್ಕ, ಮುಸ್ತಫಾ ಕೊಡಿಪ್ಪಾಡಿ, ಫಾರೂಕ್ ಕಬಕ ಇದ್ದರು.