ಅರಬ್ಬೀ ಸಮುದ್ರದಲ್ಲಿ ಇಲ್ಲಿನ ತೀರದಿಂದ 36 ನಾಟಿಕಲ್ ಮೈಲ್ ದೂರದಲ್ಲಿ ‘ತಿರುಚೆಂಡೂರ್ ಮುರುಗನ್’ ಎಂಬ ಮೀನುಗಾರಿಕಾ ದೋಣಿ ಸೆ.24ರಂದು ಅಪಾಯಕ್ಕೆ ಸಿಲುಕಿತ್ತು. ಈ ಬಗ್ಗೆ ಮುಂಬೈನ ಸಾಗರ ರಕ್ಷಣೆ ಸಮನ್ವಯ ಕೇಂದ್ರಕ್ಕೆ (ಎಂಆರ್ಸಿಸಿ) ಮಾಹಿತಿ ಬಂದಿತ್ತು. ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ಕೇಂದ್ರ ಕಚೇರಿಗೆ ಎಂಆರ್ಸಿಸಿಯು ಮಂಗಳವಾರ ಮಾಹಿತಿಯನ್ನು ರವಾನಿಸಿತ್ತು. ಪರಸ್ಥಿತಿಯ ಗಂಭೀರತೆ ಅರಿತ ಕರಾವಳಿ ರಕ್ಷಣಾ ಪಡೆಯು ತಕ್ಷಣವೇ, ದೋಣಿಯನ್ನು ಎಳೆದು ತರುವ ಅಗತ್ಯ ಸಲಕರಣೆಗಳಿಂದ ಸನದ್ಧವಾಗಿದ್ದ ಸಿ–448 ಹಾಗೂ ಸಿ–446 ಇಂಟರ್ಸೆಪ್ಟರ್ ನೌಕೆಗಳನ್ನು ನೆರವಿಗೆ ಕಳುಹಿಸಿತ್ತು.