ಅಪಾಯಕಾರಿ ಮರ ತೆರವಿಗೆ ಆಗ್ರಹ: ಬುಡಸಮೇತ ಮುರಿದುಬಿದ್ದ ಧೂಪದ ಮರದ ಪಕ್ಕದಲ್ಲೇ ಅಪಾಯಕಾರಿ ಸ್ಥಿತಿಯಲ್ಲಿ ಬೃಹತ್ ಇನ್ನೊಂದು ಮರವಿದ್ದು, ಆ ಮರವೂ ಮುರಿದು ಬೀಳುವ ಸಂಭವ ಇದೆ. ವಾಹನ ಸಂಚಾರದ ವೇಳೆ ಮರ ಉರುಳಿಬಿದ್ದರೆ ಅನಾಹುತ ಸಂಭವಿಸಲಿದ್ದು, ಅರಣ್ಯ ಇಲಾಖೆಯವರು ಅಪಾಯಕಾರಿ ಮರವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.